ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ

2024

ರಮಣಶ್ರೀ ಶರಣ ಜೀವಮಾನ ಸಾಧನ ಸನ್ಮಾನ

ಡಾ. ವೀರಣ್ಣ ರಾಜೂರ

1947 ಜೂನ್ 4 ರಂದು ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲೂಕಿನ ಬೆನಕನಾಳ ಗ್ರಾಮದಲ್ಲಿ ಜನನ. ತಂದೆ: ಬಸಪ್ಪ, ತಾಯಿ: ಫಕೀರಮ್ಮ. ಶ್ರಮ ಸಂಸ್ಕøತಿ ಮೂಲದ ಕೃಷಿಕ ಮನೆತನ.

1964ರಲ್ಲಿ ಎಸ್.ಎಸ್.ಎಲ್.ಸಿ., 1968ರಲ್ಲಿ ಬಿ.ಎ., 1971ರಲ್ಲಿ ಎಂ.ಎ. 1977ರಲ್ಲಿ ಪಿಎಚ್.ಡಿ. ಪದವಿ. ಹನುಮಸಾಗರ, ಗದಗ, ಧಾರವಾಡಗಳಲ್ಲಿ ಅಧ್ಯಯನ.

1973ರಿಂದ ವೃತ್ತಿಜೀವನ. ಕ.ವಿ.ವಿ. ಕನ್ನಡ ಅಧ್ಯಯನಪೀಠದಲ್ಲಿ ಸಹಾಯಕ ಸಂಶೋಧಕ, ಅಧ್ಯಾಪಕ, ಪ್ರವಾಚಕ, ಪ್ರಾಧ್ಯಾಪಕ, ಮುಖ್ಯಸ್ಥ, ಬಸವಪೀಠದ ಅಧ್ಯಕ್ಷ, ಕಲಾನಿಕಾಯದ ಡೀನ್, ಸಿಂಡಿಕೇಟ್ ಸದಸ್ಯ, ಪ್ರಸಾರಾಂಗ ನಿರ್ದೇಶಕರಾಗಿ ಸೇವೆ.

35 ವರ್ಷ ಬೋಧನೆ. ಸಂಶೋಧನೆ. 16 ಪಿಎಚ್.ಡಿ.. 14 ಎಂಫಿಲ್ ವಿದ್ಯಾರ್ಥಿಗಳಿಗೆ ಸಂಶೋಧನ ಮಾರ್ಗದರ್ಶನ. 2014ರಲ್ಲಿ ನಿವೃತ್ತಿ.

ಹಳಗನ್ನಡ, ನಡುಗನ್ನಡ, ವಚನಸಾಹಿತ್ಯ, ಗ್ರಂಥಸಂಪಾದನೆ. ಹಸ್ತಪ್ರತಿಶಾಸ್ತ್ರ, ಸಂಶೋಧನೆ, ರಂಗಭೂಮಿ ಮೊದಲಾದ ಕ್ಷೇತ್ರಗಳಲ್ಲಿ ಆಸಕ್ತಿ. ಸೃಜನ-ಸೃಜನೇತರ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ. ನಾಟಕ, ಕಥೆ, ಜೀವನ ಚರಿತ್ರೆ, ಸಂಶೋಧನೆ, ಗ್ರಂಥಸಂಪಾದನೆ, ಇತ್ಯಾದಿ ಸೇರಿ 140 ಕೃತಿ, 500ಕ್ಕೂ ಹೆಚ್ಚು ಲೇಖನಗಳ ರಚನೆ.

ಕನ್ನಡ ಸಾಂಗತ್ಯ ಸಾಹಿತ್ಯ ಪಿ.ಎಚ್.ಡಿ. ಮಹಾಪ್ರಬಂಧ, ವಚನ ಸಾಹಿತ್ಯ, ವಚನ ಸಂಶೋಧನೆ, ಬಸವೋತ್ತರ ಯುಗದ ವಚನಕಾರರು, ವಿಚಾರಪತ್ನಿಯರು, ನೂರುಶೋಧ, ನೂರೊಂದು ಬರಹ, ಕನ್ನಡ ನಾಟಕ ಪಥ, ಜ್ಞಾನದ ಬಲದಿಂದ, ಸಮಗ್ರ ವಚನ ಸಾಹಿತ್ಯ ಪ್ರಕಟಣಯೋಜನೆಯ ಐದು ಸಂಪುಟಗಳು, ತಾರಾವಳಿ ಸಂಪುಟ, ಶತಕ ಸಂಪುಟ, ಸಾಂಗತ್ಯ ಸಂಪುಟ, ಸ್ವರವಚನ ಸಂಪುಟ-ಮೊದಲಾದವು ಪ್ರಮುಖ ಕೃತಿಗಳು.

ತೋಂಟದ ಸಿದ್ಧಲಿಂಗೇಶ್ವರ ಸಮಗಸಾಹಿತ್ಯ ಪ್ರಕಟಣಯೋಜನೆಯ 11 ಗ್ರಂಥಗಳು, ಬಸವಪೀಠದ ಬೆಳ್ಳಿಹಬ್ಬ ಸಂದರ್ಭದಲ್ಲಿ 25 ಗ್ರಂಥಗಳು, ಬಸವಜಯಂತಿ ಆಚರಣೆ ಶತಮಾನೋತ್ಸವ ಸಂದರ್ಭದ 25 ಗ್ರಂಥಗಳು, ಮುರುಘಾಮಠದ ಉಚಿತ ಪ್ರಸಾದ ನಿಲಯ ಶತಮಾನೋತ್ಸವ ಸಂದರ್ಭದ 112 ಗ್ರಂಥಗಳು, ಡಾ. ಎಂ.ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ ಸಂಪುಟ ಪ್ರಕಟಣ ಯೋಜನೆಯ 40 ಸಂಪುಟಗಳ ಪ್ರಧಾನ ಸಂಪಾದಕರಾಗಿ ಕಾರ್ಯ.

ಹಂಪಿ ಕನ್ನಡ ವಿಶ್ವವಿದ್ಯಾಲಯ 12ನೇ ಅಖಿಲ ಕರ್ನಾಟಕ ಹಸ್ತಪ್ರತಿ ಸಮ್ಮೇಲನ, ಬೆಂಗಳೂರು ವಚನಸಾಹಿತ್ಯ ಪರಿಷತ್ತಿನ ಸಮ್ಮೇಳನ, ಕುಷ್ಟಗಿ ತಾಲೂಕ ದ್ವಿತೀಯ ಸಾಹಿತ್ಯ ಸಮ್ಮೇಳನ-ಸರ್ವಾಧ್ಯಕ್ಷ, 600ಕ್ಕೂ ಹೆಚ್ಚು ಸಮ್ಮೇಳನ, ವಿಚಾರ ಸಂಕಿರಣ, ಕಾರ್ಯಾಗಾರ, ವಿಶೇಷೋಪನ್ಯಾಸ ಮಾಲೆ, ವಿವಿಧ ಸಂಘ-ಸಂಸ್ಥೆಗಳ ಸಮಾರಂಭಗಳಲ್ಲಿ ಉಪನ್ಯಾಸ, ಪ್ರಬಂಧ ಮಂಡನೆ.

ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ರಾಜೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ- ಗ್ರಂಥ ಪ್ರಶಸ್ತಿ, ರಮಣಶ್ರೀ ಶರಣ ಪ್ರಶಸ್ತಿ, ಕ.ವಿ.ವಿ. ಅರಿವೇ ಗುರು ಪ್ರಶಸ್ತಿ, ಡಾ. ಎಂ.ಎಂ. ಕಲಬುರ್ಗಿ ಪ್ರಶಸ್ತಿ ಸೇರಿದಂತೆ 25ಕ್ಕೂ ಹೆಚ್ಚು ಪ್ರಶಸ್ತಿ-ಗೌರವಗಳು. ಸದ್ಯ ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾಗಿ ಸೇವೆ.

ಡಾ. ವೀರಣ್ಣ ರಾಜೂರ ಅವರ ಒಟ್ಟಾರೆ ಸಾಧನೆಯನ್ನು ಪರಿಗಣಿಸಿ, ಜೀವಮಾನದ ಸಾಧನೆಗಾಗಿ ’ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ 2024 ನೆಯ ಸಾಲಿನ ’ರಮಣಶ್ರೀ ಶರಣ ಜೀವಮಾನ್ಅದ ಸಾಧಕ ಸನ್ಮಾನ’ ವನ್ನು ನೀಡಿ ಸನ್ಮಾನಿಸಲು ಹೆಮ್ಮೆ ಪಡುತ್ತದೆ

ರಮಣಶ್ರೀ ಶರಣ ವಿಶೇಷ ಪುರಸ್ಕಾರ

ಡಾ. ಸಂಗಮೇಶ್ ಉಪಾಸೆ

ಶ್ರೀಯುತ ಮಹಾದೇವಪ್ಪ ಹಾಗೂ ಸಿದ್ದಲಿಂಗಮ್ಮ ದಂಪತಿಗಳ ಮಗನಾಗಿ 5/6/1974 ರಲ್ಲಿ ಹುಟ್ಟಿದ ಡಾ. ಸಂಗಮೇಶ ಉಪಾಸೆಯವರು ಅತ್ಯುತ್ತಮ ಬರಹಗಾರ, ನಟ, ಹಾಡುಗಾರ ಹಾಗೂ ಕಲಾವಿದರು. ರಾಜ್ಯಶಾಸ್ತ್ರ, ಇಂಗ್ಲಿಷ್, ಫಿಲಾಸಫಿ ವಿಷಯದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ, ಬಿ.ಎ. ಪದವಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ., ಪದವಿ ಹಾಗೂ “ವಚನ ಅಧ್ಯಯನಗಳ ಸಾಂಸ್ಕೃತಿಕ ಅನುಸಂಧಾನ”ಎಂಬ ವಿಷಯದಲ್ಲಿ ಹಂಪಿ ವಿಶ್ವವಿದ್ಯಾನಿಲಯದಿಂದ ಪಿ.ಹೆಚ್.ಡಿ ಪದವಿ ಪಡೆದಿದ್ದಾರೆ.

2006 ರಲ್ಲಿ ಕೆ.ಎ.ಎಸ್ ತೇರ್ಗಡೆಯಾಗಿ”ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನ ಇಲಾಖೆ’ಯಲ್ಲಿ ಸಹಾಯಕ ನಿಯಂತ್ರಕರಾಗಿ ನೇಮಕ ಹಾಗು ’ವಾಣಿಜ್ಯ ತೆರಿಗೆ ಇಲಾಖೆ’ಯಲ್ಲಿ ಸಹಾಯಕ, ಉಪ ಮತ್ತು ಜಂಟಿ ಆಯುಕ್ತರಾಗಿ ಸೇವೆ. ಪ್ರಸ್ತುತ ಕಾರ್ಮಿಕ ಇಲಾಖೆಯ ’ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ಯ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಣೆ.

ಧಾರವಾಡದ ರಂಗಭೂಮಿ ಶಿಬಿರದಲ್ಲಿ ತರಬೇತಿ ಪಡೆದ ಇವರು ಅಭಿನವ ಭಾರತಿ ಧಾರವಾಡ, ’ಬಾಲಭವನ ಸಮಿತಿ’, ಬೆಂಗಳೂರು ಮುಂತಾದ ಕಡೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಚಾಣಕ್ಯ, ಅಳಿಯ ದೇವರು ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ ಅಪ್ಪ, ದೇವದಾಸಿ, ಮುದುಕನ ಮದುವೆ, ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮನೆತನ, ವಠಾರ, ಹೀಗೆ ಹಲವಾರು ಧಾರವಾಹಿಗಳಿಗೆ ಚಿತ್ರ ಸಂಭಾಷಣೆ, ಸಿಲ್ಲಿಲಲ್ಲಿ, ಪಾಪ ಪಾಂಡು ಮುಂತಾದ ಧಾರವಾಹಿಗಳಲ್ಲಿ ನಟಿಸಿರುವ ಇವರು ವೀರ ಕನ್ನಡಿಗ, ಯುವರತ್ನ ಮುಂತಾದ 10 ಹಲವಾರು ಚಲನಚಿತ್ರಗಳಲ್ಲಿ ನಟಿಸಿದ ಕೀರ್ತಿ ಇವರದು. ಬೆಳಕಿನ ನಡಿಗೆ, ನನ್ನದೊಂದು ಕನಸಿದೆ, ಮುಂತಾದ ಇವರ ಪುಸ್ತಕಗಳು ಪ್ರಕಟಗೊಂಡಿವೆ.

ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,ದೇವರ ದಾಸಿಮಯ್ಯ, ಕನ್ನಡ ಕಲಾ ಶ್ರೇಷ್ಠ, ವಿಶ್ವಮಾನವ ಕುವೆಂಪು ರತ್ನ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ, ನಗರಾಭಿವೃದ್ಧಿ, ಕಾನೂನುಪಾಲನೆ ಮತ್ತು ಪಶು ವೈದ್ಯ, ಪೌರಾಡಳಿತ, ಗ್ರಾಮೀಣಾಭಿವೃದ್ಧಿ, ತೋಟಗಾರಿಕೆ ಮುಂತಾದ ಇಲಾಖೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಕನ್ನಡ ಉಪನ್ಯಾಸಕರಾಗಿ ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಅಮೋಘ ಸೇವೆಯನ್ನು ಪರಿಗಣಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು 2024ರ ರಮಣಶ್ರೀ ಶರಣ ಪ್ರಶಸ್ತಿ ನೀಡಲು ಅಭಿಮಾನ ಪಡುತ್ತದೆ.

ರಮಣಶ್ರೀ ಶರಣ ಪ್ರಶಸ್ತಿಗಳು

ಹಿರಿಯ ಶ್ರೇಣಿ

ಶರಣ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಲೇಖಕರನ್ನು ಸನ್ಮಾನಿಸಲಾಯಿತು.

ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರ

ಶ್ರೀ ಎಚ್.ಎಸ್. ಸಿದ್ಧಗಂಗಪ್ಪ ಮತ್ತು ಡಾ. ಗುರುಲಿಂಗಪ್ಪ ಧಬಾಲೆ

ಶ್ರೀ ಎಚ್.ಎಸ್. ಸಿದ್ಧಗಂಗಪ್ಪ

ಶ್ರೀ ಎಚ್.ಎಸ್. ಸಿದ್ಧಗಂಗಪ್ಪನವರು ಏಪ್ರಿಲ್ ೬, ೧೯೪೮ ರಂದು ತುಮಕೂರು ತಾಲ್ಲೂಕು, ಬ್ಯಾತಗ್ರಾಮದಲ್ಲಿ ಶರಣ ದಂಪತಿಗಳಾದ ಶ್ರೀ ಹೆಚ್.ಸಿ.ಶಿವಪ್ಪ ಮತ್ತು ಶ್ರೀಮತಿ ವೀರಮ್ಮ ಅವರ ಸುಪುತ್ರರಾಗಿ ಜನಿಸಿದರು. ಕನ್ನಡ ಸ್ನಾತಕೋತ್ತರ ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿರುವ ಶ್ರೀಯುತರು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ‘ಕರ್ನಾಟಕ ವಿಕಾಸ’ ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ ನುಡಿ’, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ‘ಮಹಾಮನೆ’ ಮಾಸಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ‘ಸಿದ್ಧಗಂಗಾ’ ಮಾಸಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀ ಎಚ್.ಎಸ್. ಸಿದ್ಧಗಂಗಪ್ಪನವರು ಕರ್ನಾಟಕ ಜನಪದ ಕಲೆಗಳು, ವಿದ್ಯಾನಿಧಿ, ಅನುಭಾವಪಥ, ದಾಸೋಹ ಸಿರಿ, ನಿರಂಜನಶ್ರೀ, ನಿಬ್ಬೆರಗು, ವಜ್ರಗಂಗಾ, ಶರಣತತ್ತ÷್ವ ಚಿಂತನೆ, ಅಮೃತ ಗಂಗಾ ಸೇರಿದಂತೆ ೧೭೦ಕ್ಕೂ ಹೆಚ್ಚು ಕೃತಿಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಅಳವಾಗಿ ಅಧ್ಯಯನ ನಡೆಸಿ ೨೦ಕ್ಕೂ ಹೆಚ್ಚು ಕೃತಿಗಳನ್ನು, ಶರಣ ಸಾಹಿತ್ಯಕ್ಕೆ ಸಂಬAಧಿಸಿದAತೆ ಹೂಗಾರ ಮಾದಯ್ಯ, ಬಸವಣ್ಣನವರ ನೆಲೆಗಳು, ಡೋಹರಕಕ್ಕಯ್ಯ, ಢಕ್ಕೆಯೆ ಮಾರಯ್ಯ, ಕನ್ನದ ಮಾರಿ ತಂದೆ, ಕಿನ್ನರಿ ಬೊಮ್ಮಯ್ಯ, ಶರಣರ ಸಮಾಜೋ ಧಾರ್ಮಿಕ ಚಳವಳಿ, ಕಿನ್ನರಿ ಬೊಮ್ಮಯ್ಯ, ಶರಣರ ಹೆಜ್ಜೆ ಗುರುತುಗಳು, ಜೀವನ ಚರಿತ್ರೆಗಳು, ವ್ಯಕ್ತಿ ಚಿತ್ರಗಳು, ಮಠಗಳ ಇತಿಹಾಸ ಸೇರಿದಂತೆ ೩೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

‘ಹೂತಿಟ್ಟ ಹಣವೆಲ್ಲ ಮಣ್ಣಾಗಿ ಹೋದಾಗ’, ‘ಸಾಕು ಮಾಡೋ ಶಿವನೆ’, ‘ರಂಗಣ್ಣನಕಥೆ’, ‘ಜಾನಪದ ಸಂಶೋಧನಾ ತೆನೆಗಳು’, ‘ಬಹುಮುಖಿ ಜಾನಪದ’, ‘ಕರ್ನಾಟಕ ಸಾಧನೆ ಸಂಪನ್ನರು’ ಕೃತಿಗಳಿಗೆ ರಾಜ್ಯಮಟ್ಟದ ಪ್ರಶಸ್ತಿಗಳು ಬಂದಿವೆ.

ಪ್ರಶಸ್ತಿ-ಗೌರವಗಳು : ‘ಕುವೆಂಪು ವಿಶ್ವಮಾನವ’ ಪ್ರಶಸ್ತಿ, ‘ಪರಮೇಶಿ ಪುಲಕೇಶಿ’ ಪ್ರಶಸ್ತಿ, ‘ಸಿದ್ಧಗಂಗಾ ಶಿವಕುಮಾರಶ್ರೀ’ ಪ್ರಶಸ್ತಿ, ‘ಶರಣಜ್ಯೋತಿ’ ಪ್ರಶಸ್ತಿ, ‘ಸಾಹಿತ್ಯ ಸಿರಿ’, ‘ಸರ್.ಎಂ.ವಿಶ್ವೇಶ್ವರಯ್ಯ ರಾಷ್ಟಿçÃಯ’ ಪ್ರಶಸ್ತಿ, ‘ಸಾತ್ವಿಕ’ ಪ್ರಶಸ್ತಿ, ‘ಶರಣ ಸಾಹಿತ್ಯ ಸೇವಾ ಭೂಷಣ’ ಪ್ರಶಸ್ತಿ, ತುಮಕೂರು ಜಿಲ್ಲೆ ರಾಜ್ಯೋತ್ಸವ ಪ್ರಶಸ್ತಿ, ‘ಸಾಧಕ ಸೇವಾರತ್ನ’ ಪ್ರಶಸ್ತಿ, ‘ಅಡ್ವೆöÊಸರಿ ಸಾಹಿತ್ಯ’ ಪ್ರಶಸ್ತಿ, ‘ಡಾ.ಪುಟ್ಟರಾಜ ಕಲಾ ಸಾಹಿತ್ಯ’ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಶ್ರೀ ಸಿದ್ಧಗಂಗಾ ಮಠ, ಶ್ರೀ ಸುತ್ತೂರು ಮಠ, ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠ, ಶ್ರೀ ದೇಗುಲಮಠ, ಶ್ರೀ ಕಂಚುಗಲ್ ಬಂಡೇಮಠ, ಶ್ರೀ ಮರಳೇಗವಿಮಠ, ತಮಿಳುನಾಡಿನ ಹೊಸೂರು ಮಠ ಸೇರಿದಂತೆ ಅನೇಕ ಮಠ ಮಾನ್ಯಗಳು, ವಿವಿಧ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.

ಆಕಾಶವಾಣಿ ಜಾನಪದ ಕಲಾವಿದರ ಆಯ್ಕೆ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಹಾಗೂ ರಾಷ್ಟç ಮಟ್ಟದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ೧೦೦ಕ್ಕೂ ಹೆಚ್ಚು ಮೌಲಿಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ಬೆಂಗಳೂರು, ಭದ್ರಾವತಿ, ಆಕಾಶವಾಣಿ ಕೇಂದ್ರಗಳಿAದ ೧೧೦ಕ್ಕೂ ಹೆಚ್ಚು ಕಾರ್ಯಕ್ರಮಗಳು ಬಿತ್ತರಗೊಂಡಿವೆ. ಸಾಹಿತ್ಯ, ಸಂಸ್ಕೃತಿ, ವ್ಯಕ್ತಿ ಚಿತ್ರಗಳು, ಜಾನಪದ ಕುರಿತು ೬೦೦ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಹೀಗೆ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಶ್ರೀ ಎಚ್.ಎಸ್. ಸಿದ್ಧಗಂಗಪ್ಪ ಅವರಿಗೆ ’ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ’ ೨೦೨೪ ನೆಯ ಸಾಲಿನ ’ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ’ ಯನ್ನು ನೀಡಲು ಹೆಮ್ಮೆ ಪಡುತ್ತವೆ.

ಡಾ. ಗುರುಲಿಂಗಪ್ಪ ಧಬಾಲೆ

ಡಾ. ಗುರುಲಿಂಗಪ್ಪ ಧಬಾಲೆ ಅವರು ಬೀದರ ಜಿಲ್ಲೆ ಹುಲಸೂರು ತಾಲ್ಲೂಕಿನ ತೊಗಲೂರು ಗ್ರಾಮದ ಶ್ರೀಮತಿ ಶಿವಮ್ಮ-ಶ್ರೀ ಶಂಕರೆಪ್ಪ ಧಬಾಲೆ ದಂಪತಿಗಳಿಗೆ ದಿನಾಂಕ ೦೨.೦೪.೧೯೬೭ ರಂದು ಜನಿಸಿದ್ದಾರೆ. ಕಳೆದ ೨೯ ವರ್ಷಗಳಿಂದ ಮಹಾರಾಷ್ಟçದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟದ ಸಿ.ಬಿ.ಖೇಡಗಿ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶರಣ ಅಂಬಿಗರ ಚೌಡಯ್ಯ, ಬೀದರ ಜಿಲ್ಲೆಯ ಅನುಭಾವಿ ಕವಿಗಳು ಎಂಬ ವಿಷಯಗಳ ಮೇಲೆ ಅನುಕ್ರಮವಾಗಿ ಎಂಫಿಲ್, ಪಿಎಚ್.ಡಿ. ಮಾಡಿರುವ ಡಾ. ಧಬಾಲೆಯವರು ಕಾವ್ಯ, ವಿಮರ್ಶೆ, ವಿಚಾರ ಸಾಹಿತ್ಯ, ಸಂಶೋಧನೆ, ಸಂಪಾದನೆ ಕ್ಷೇತ್ರಗಳಿಗೆ ಸಂಬAಧಿಸಿದAತೆ ಇದುವರೆಗೆ ೨೪ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಅನೇಕ ಲೇಖನಗಳು, ಕವನಗಳು ಬಸವಪಥ, ಮಹಾಮನೆ, ಹೊಸತು, ತುಷಾರದಂಥ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಗುಲಬರ್ಗಾ ಆಕಾಶವಾಣಿಯಲ್ಲೂ ಪ್ರಸಾರವಾಗಿವೆ. ಕನ್ನಡ-ಮರಾಠಿ ಭಾಷಾ ಬಾಂಧವ್ಯದAಥ ಕೆಲವು ಲೇಖನಗಳು ಹಾಗೂ ಬಸವಣ್ಣನವರ ವಚನಸಂಗ್ರಹದAಥ ಕೆಲವು ಕೃತಿಗಳು ಕಾಲೇಜು ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ಪಠ್ಯಗಳಾಗಿವೆ. ಸೊಲ್ಲಾಪುರ ಇನ್ ಹಾಗೂ ಡಿ.ಡಿ.ಚಂದನ (ಬೆಳಕು) ವಾಹಿನಿಗಳಲ್ಲಿ ಅವರ ಸಂದರ್ಶನವೂ ಪ್ರಸಾರವಾಗಿದೆ.

ಡಾ. ಗುರುಲಿಂಗಪ್ಪ ಧಬಾಲೆ ಅವರು ನಾಡಿನ ಅನೇಕ ವಿಶ್ವವಿದ್ಯಾಲಯಗಳ ಕನ್ನಡ ಅಭ್ಯಾಸ ಮಂಡಳಿಯ ಸದಸ್ಯರಾಗಿ, ಅಧ್ಯಕ್ಷರಾಗಿ ಕರ‍್ಯ ನಿರ್ವಹಿಸುತ್ತಿದ್ದಾರೆ. ಮಹಾರಾಷ್ಟç ಸರಕಾರದ ಎಚ್.ಎಸ್.ಸಿ ಪಠ್ಯಪುಸ್ತಕ ಮಂಡಳಿಯ ಸದಸ್ಯರಾಗಿ, ಸಮನ್ವಯಕರಾಗಿ ಹಾಗೂ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸೊಲ್ಲಾಪುರ ವಿಶ್ವವಿದ್ಯಾಲಯದ ಸಂಶೋಧನ ಮಾರ್ಗದರ್ಶಕರೂ ಆಗಿರುವ ಧಬಾಲೆಯವರ ಮಾರ್ಗದರ್ಶನದಲ್ಲಿ ಇದುವರೆಗೆ ಆರು ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಏಳು ವಿದ್ಯಾರ್ಥಿಗಳು ಸಂಶೋಧನ ಅಧ್ಯಯನ ಕೈಕೊಂಡಿದ್ದಾರೆ. ರಾಷ್ಟçದ ಹತ್ತೆಂಟು ವಿಶ್ವವಿದ್ಯಾಲಯಗಳ ಕನ್ನಡ ಸಂಶೋಧನ ಪ್ರಬಂಧಗಳ ಮೌಲ್ಯಮಾಪಕರಾಗಿಯೂ ಕರ‍್ಯಮಾಡಿರುವ ಶ್ರೀಯುತರು ಅಂತರ್Àರಾಷ್ಟಿçÃಯ, ರಾಷ್ಟಿçÃಯ, ರಾಜ್ಯ ಮಟ್ಟದ ವಿಚಾರ ಸಂಕಿರಣ, ಸಮಾವೇಶ, ಕರ‍್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಗೋಷ್ಠಿಯ ಅಧ್ಯಕ್ಷರಾಗಿ ಭಾಗವಹಿಸಿ ಇದುವರೆಗೆ ಕನ್ನಡ ಸಾಹಿತ್ಯ ಹಾಗೂ ವಚನಸಾಹಿತ್ಯಕ್ಕೆ ಸಂಬAಧಿಸಿದAತೆ ೭೦ಕ್ಕೂ ಅಧಿಕ ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಉತ್ತಮ ಸಂಘಟಕರೂ ಆಗಿರುವ ಧಬಾಲೆಯವರು ಕರ್ನಾಟಕ ಸಾಹಿತ್ಯ ಅಕಾಡೆಮಿಯಂಥ ಅನೇಕ ಪ್ರತಿಷ್ಠಿತ ಸಂಘ-ಸAಸ್ಥೆಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಹೊರನಾಡಿನಲ್ಲ್ಲಿಯೇ ಮೊಟ್ಟಮೊದಲು ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತಿನ ಘಟಕ ಸ್ಥಾಪಿಸಿದ ಹಿರಿಮೆ ಅವರದು. ಘಟಕದ ಕರ‍್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೊಲ್ಲಾಪುರ ಜಿಲ್ಲೆಯ ಹಳ್ಳಿ, ನಗರ, ಪಟ್ಟಣ ಸಂಚರಿಸಿ ದತ್ತಿ ಉಪನ್ಯಾಸ, ವಿಶೇಷ ಉಪನ್ಯಾಸ, ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸುವುದರ ಮೂಲಕ ಮರಾಠಿ ನೆಲದಲ್ಲಿ ಕನ್ನಡದ-ವಚನಸಾಹಿತ್ಯದ ಕಂಪು ಹರಡಿಸಿದ್ದಾರೆ. ಬಿಜಾಪುರದ ಸಿದ್ಧೇಶ್ವರ ಶ್ರೀಗಳ ಸಾನಿಧ್ಯದಲ್ಲಿ, ಸನ್ಮಾನ್ಯ ಶ್ರೀ ನಾಡೋಜ ಗೊರುಚ ಅವರ ಅಧ್ಯಕ್ಷತೆಯಲ್ಲಿ ೨೦೧೦ರಲ್ಲಿ ಘಟಕದ ದಶಮಾನೋತ್ಸವ ಹಮ್ಮಿಕೊಂಡು ಶರಣ ಸೊಲ್ಲಾಪುರ ಎಂಬ ಸ್ಮರಣಿಕೆಯನ್ನು ಹಾಗೂ ೨೦೧೧ರ ಶ್ರಾವಣ ತಿಂಗಳಲ್ಲಿ ಉಪನ್ಯಾಸ ಮಾಲಿಕೆ ಸಂಯೋಜಿಸಿ ಶರಣ ಶ್ರಾವಣ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ.

ಕನ್ನಡ ಹಾಗೂ ಮರಾಠಿ ಎರಡೂ ಭಾಷೆಗಳ ಮೇಲೂ ಹಿಡಿತ ಹೊಂದಿರುವ ಶ್ರೀಯುತರು ಗಡಿಭಾಗದಲ್ಲಿ ಅನೇಕ ಸಮಾವೇಶ, ವಿಚಾರ ಸಂಕಿರಣಗಳನ್ನು ಸಂಘಟಿಸುವುದರ ಮೂಲಕ ಎರಡೂ ರಾಜ್ಯಗಳ ನಡುವೆ ಇರುವಂಥ ಭಾಷಿಕ, ಸಾಂಸ್ಕೃತಿಕ, ಸಾಹಿತ್ಯ್ಯಿಕ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದ್ದಾರೆ. ಈ ಎರಡೂ ರಾಜ್ಯಗಳ ಶ್ರೇಯಸ್ಸನ್ನು ಬಯಸುವ ಶ್ರೀಯುತರಿಗೆ ಇದುವರೆಗೆ ಅನೇಕ ಸಂಘ-ಸAಸ್ಥೆಗಳು ಹಲವಾರು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿವೆ. ೨೦೧೬ರಲ್ಲಿ ನಡೆದ ಬೀದರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ೬ನೇ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವೂ ಅವರಿಗೆ ಒಲಿದಿದೆ.

ಆಧುನಿಕ ವಚನ ರಚನೆ

ಪ್ರೊ.ಚಿದಾನಂದ ಪ.ಸಿದ್ಧಾಶ್ರಮ ಮತ್ತು ಸುಶೀಲ ಸೋಮಶೇಖರ್

ಪ್ರೊ.ಚಿದಾನಂದ ಪ.ಸಿದ್ಧಾಶ್ರಮ

ಧಾರವಾಡ ಜಿಲ್ಲೆಯ ಹುಲ್ಲಂಬಿ ಎಂಬ ಗ್ರಾಮದಲ್ಲಿ ಜನಿಸಿದ ಪ್ರೊ.ಚಿದಾನಂದ ಪ.ಸಿದ್ಧಾಶ್ರಮ ಅವರು ಪ್ರಾಥಮಿಕ ಶಾಲಾ ಹಂತದಿಂದ ಸ್ನಾತಕೋತ್ತರ ಪದವಿಯವರೆಗೂ ಪ್ರಥಮ ದರ್ಜೆಯ ಪ್ರಥಮ ಶ್ರೇಣಿಯ ವಿದ್ಯಾರ್ಥಿಯಾಗಿ ಬೆಳಗಿದವರು. ಬೆವರ ಬೆಲೆ ಅರಿತಿರುವ ಸಿದ್ಧಾಶ್ರಮ ಅವರು ಕಷ್ಟಪಟ್ಟು ಬದುಕನ್ನು ರೂಪಿಸಿಕೊಂಡವರು. ವೈಚಾರಿಕ ಮನೋಭಾವದ ವೈಜ್ಞಾನಿಕ ಚಿಂತನೆಯ ಸಿದ್ಧಾಶ್ರಮ ಅವರು ಕಾವ್ಯ, ಆಧುನಿಕ ವಚನ, ವಿಮರ್ಶೆ, ಸಂಶೋಧನೆ, ಸಂಸ್ಕೃತಿ ಚಿಂತನೆ, ಆತ್ಮಕಥೆ-ಮುಂತಾದ ಪ್ರಕಾರಗಳಲ್ಲಿ ನಿರಂತರ ಕೃಷಿ ಮಾಡಿ ೪೦ ಕ್ಕಿಂತಲೂ ಅಧಿಕ ಮೌಲಿಕ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.

ಆಧುನಿಕ ವಚನಕಾರರಲ್ಲಿ ಸಿದ್ಧಾಶ್ರಮ ಅವರದು ದೊಡ್ಡ ಹೆಸರು. ಮಹತ್ವಪೂರ್ಣವಾದ ಮೂರು ಆಧುನಿಕ ವಚನ ಸಂಕಲನಗಳನ್ನು ಪ್ರಕಟಿಸಿರುವ ಸಿದ್ಧಾಶ್ರಮ ಅವರು ಇಲ್ಲಿನ ವಚನಗಳನ್ನು ವೈಚಾರಿಕ, ಸಾಮಾಜಿಕ, ನೈತಿಕ, ಶೈಕ್ಷಣಿಕ, ರಾಜಕೀಯ, ಆಧ್ಯಾತ್ಮಿಕ ಎಂದು ವಿಂಗಡಿಸಿಕೊಂಡು ಸಮಕಾಲೀನ ಸಮಾಜದಲ್ಲಿನ ಭ್ರಷ್ಟಾಚಾರ, ಅಧಿಕಾರದಾಹ, ಜಾತೀಯತೆ, ಸ್ವಜನಪಕ್ಷಪಾತ, ಅಸ್ಪೃಶ್ಯತೆ, ಅನೈತಿಕತೆ- ಮುಂತಾದ ಪಿಡುಗುಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿರುವ ದುರಂತವನ್ನು ಬೆಳಕಿಗೆ ಹಿಡಿದು ಅದಕ್ಕೆ ಪರಿಹಾರ ಮಾರ್ಗವನ್ನೂ ಸೂಚಿಸಿರುವುದು ಇಲ್ಲಿನ ವಚನಗಳ ಮೌಲ್ಯವನ್ನು ಹೆಚ್ಚಿಸಿದೆ ಎನ್ನಬೇಕು.

ಕನ್ನಡದ ಬಹುಮುಖ್ಯ ವಿಮರ್ಶಕರಾದ ಸಿದ್ಧಾಶ್ರಮ ಅವರು ಆದಿಕವಿ ಪಂಪನಿಂದ ಹಿಡಿದು ಮೊಗಳ್ಳಿ ಗಣೇಶ ಅವರವರೆಗೂ ಎಲ್ಲ ಕಾಲಘಟ್ಟಗಳ, ಎಲ್ಲ ಪಂಥಗಳ ಸಾಹಿತಿಗಳ ಮುಖ್ಯ ಕೃತಿಗಳನ್ನು ಸಮಾಜೋ-ಸಾಂಸ್ಕೃತಿಕ ನೆಲೆಯಲ್ಲಿ ವಿಮರ್ಶೆಗೊಳಪಡಿಸಿದ್ದಾರೆ.

ವಿಶೇಷವಾಗಿ ಹನ್ನೆರಡನೆಯ ಶತಮಾನದ ಶರಣರಾದ ಬಸವೇಶ್ವರ, ಅಲ್ಲಮಪ್ರಭು, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ-ಮುಂತಾದ ಶರಣ-ಶರಣೆಯರ ವಚನಗಳನ್ನು ಸಮಾಜೋ-ಸಾಂಸ್ಕೃತಿಕ ನಲೆಯಲ್ಲಿ ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ, ವಿಮರ್ಶಿಸಿದ್ದಾರೆ. ಉತ್ತಮ ಕವಿಯಾದ ಇವರು ೬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ತಲಸ್ಪರ್ಶಿ ಸಂಶೋಧಕರಾದ ಸಿದ್ಧಾಶ್ರಮ ಅವರು ೪ ಸಂಶೋಧನಾ ಕೃತಿಗಳನ್ನು ಹೊರತಂದಿದ್ದಾರೆ. ಉತ್ತಮ ಸಂಸ್ಕೃತಿ ಚಿಂತಕರಾದ ಇವರು ೨ ಸಂಸ್ಕೃತಿ ಚಿಂತನೆಯ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ನಾನಲ್ಲದ ನಾನು’ ಎಂಬ ಇವರ ಆತ್ಮಕಥೆ ಗ್ರಾಮ ಭಾರತದ ಸತ್ವವನ್ನು ಬಿಂಬಿಸುವ ಉತ್ತಮ ಕೃತಿ.

ಈ ಹಿನ್ನೆಲೆಯಲ್ಲಿ ಪ್ರೊ. ಚಿದಾನಂದ ಪ.ಸಿದ್ಧಾಶ್ರಮ ಅವರ ಸಾಧನೆಯನ್ನು ಗಮನಿಸಿ ’ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು’ ಮತ್ತು ’ರಮಣಶ್ರೀ ಪ್ರತಿಷ್ಠಾನ’ 2024ನೆಯ ಸಾಲಿನ ’ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಲು ಹೆಮ್ಮೆ ಪಡುತ್ತವೆ.

 

ಸುಶೀಲ ಸೋಮಶೇಖರ್

ಸುಶೀಲಾ ಸೋಮಶೇಖರ್ ಇವರು 1955 ರ ಜೂನ್ 10 ರಂದು ಹಾಸನ ಜಿಲ್ಲೆಯ ಯಲಗುಂದ ಗ್ರಾಮದ ಶರಣ ದಂಪತಿಗಳಾದ ಲಿಂ.ತಮ್ಮಣ್ಣ ಗೌಡ ಮತ್ತು ನಂಜಮ್ಮ ಇವರ ಮೊದಲ ಮಗಳಾಗಿ ಜನಿಸಿದರು. ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುವ ಇವರದು ಸಾಹಿತ್ಯಾಸಕ್ತ  ಮನಸ್ಸು. ಹಾಸನ ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷರಾಗಿ ಹಾಗೂ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಂಗ ಸಂಸ್ಥೆಯಾದ ರಾಜ್ಯ ಕದಳಿ ಮಹಿಳಾ ವೇದಿಕೆಯ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಚನ ಸಾಹಿತ್ಯ ಮತ್ತು ಜಾನಪದ ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯುಳ್ಳ ಇವರ ಅನೇಕ ಕೃತಿಗಳು ಪ್ರಕಟಗೊಂಡಿವೆ. ‘ನಕ್ಕು ಬಿಡೇ ಗೆಳತಿ, ಅಂಗಳ ಅನಾಥವಲ್ಲ, ಮಳೆ ಪುರುಷ, ಸದ್ದಿಲ್ಲದ ನಗು, ಎಂಬ ಕವನ ಸಂಕಲನಗಳು. ವಚನ ಸಂವಹನ, ಶರಣ ಸಂಸ್ಕೃತಿ ಪ್ರಸ್ತುತ ತಲ್ಲಣಗಳು, ವಚನಧರ್ಮ ವೈವಿಧ್ಯ, ವಚನ ವಿಚಾರಧಾರೆ, ಶರಣರ ಜೀವ ಪರ ನಿಲುವುಗಳು, ಆಧುನಿಕ ವಚನಕ್ಕೆ ಸಂಬಂಧಪಟ್ಟಂತೆ ವಚನ ಮಂದಾರ ಭಾಗ-1 ಮತ್ತು ವಚನ ಮಂದಾರ ಭಾಗ-2  ಕೃತಿಗಳು ಬಂದಿವೆ.

ನೆನಪಿನಂಗಳ ಕಥಾ ಸಂಕಲನ, ಚಿಗುರು, ಅರಳುವ ಹೂಗಳು, ನಗುವ ನಕ್ಷತ್ರಗಳು ಮಕ್ಕಳ ಕವನ ಸಂಕಲನಗಳು, ಭಾವಾಂತರಂಗ, ಕಾವ್ಯಾನುಭವ ಸಾಧಕರ ಸುಳುಹುಗಳು, ನುಡಿ ಜ್ಯೋತಿರ್ಲಿಂಗ,ಚಿಂತನಾನುಭವ “ಒಳಗೊಂದು ತಣ್ಣನೆಯ ನದಿ” ಕೃತಿಗಳು ಪ್ರಕಟಗೊಂಡಿವೆ.

ಮುಂಬೈ ಆಂಧ್ರವನ್ನು ಒಳಗೊಂಡಂತೆ ನಮ್ಮ ಅನೇಕ ಜಿಲ್ಲೆಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ. ಚಂದನ ಟಿವಿಯಲ್ಲಿ ಇವರ ಪರಿಚಯ ಬಂದಿದೆ. ದೂರದರ್ಶನದ ಜಾಣರ ಜಗುಲಿ, ಸುವರ್ಣ ಟಿವಿಯಲ್ಲಿ ಭಾಗವಹಿಸಿದ್ದಾರೆ. ಹಾಸನ ಆಕಾಶವಾಣಿಯಲ್ಲಿ ಹಲವು ವರ್ಷಗಳಿಂದಲೂ ಇವರ ಚಿಂತನಗಳು, ಲೇಖನಗಳು, ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ. ಇವರ ಸಂದರ್ಶನ ಕೂಡ ಬಿತ್ತರಗೊಂಡಿದೆ. ದಸರಾ ಕವಿಗೋಷ್ಠಿಯನ್ನೊಳಗೊಂಡಂತೆ ಅನೇಕ ಕಾರ್ಯಕ್ರಮಗಳಲ್ಲಿ ಕವನ ವಾಚಿಸಿದ್ದಾರೆ. ಅಂತೆಯೇ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿರುತ್ತಾರೆ. ಇವರ ಕೆಲವು ಮಕ್ಕಳ ಕವನಗಳು ಬೆಂಗಳೂರು ಖಾಸಗಿ ಶಾಲೆಯ ತರಗತಿಯ ಮಕ್ಕಳ ಪಠ್ಯ ಸೂಚಿಯಲ್ಲಿ ಪ್ರಕಟಗೊಂಡಿದೆ.

ಎರಡು ಕವನಗಳು ಹಿಂದಿ ಭಾಷೆಗೆ ತರ್ಜುಮೆಗೊಂಡಿವೆ.

ಸಕಲೇಶಪುರ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಇವರ ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳು “ಸಹೃದಯಿ” ಎಂಬ ಅಭಿನಂದನ ಗ್ರಂಥವನ್ನು ಸಮರ್ಪಿಸಿದ್ದಾರೆ.

ಪ್ರಶಸ್ತಿ ಸನ್ಮಾನಗಳು…..

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ, ಪುಸ್ತಕ ಪ್ರಾಧಿಕಾರದ ‘ಮಕ್ಕಳ ಪುಸ್ತಕ ಸೊಗಸು ಬಹುಮಾನ,’ ಶ್ರೀ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿ ಸಂಘದ ‘ಸಂಘ ಸಿರಿ’ ಪ್ರಶಸ್ತಿ ‘ಗೀತಾ ದೇಸಾಯಿ ದತ್ತಿ ಬಹುಮಾನ, ಶಾರದಾ ರಾಮಲಿಂಗಪ್ಪ ದತ್ತಿ ಬಹುಮಾನ, ಸಾಹಿತ್ಯ ಸಿರಿ, ಅಡ್ವೈಸರ್ ಪತ್ರಿಕೆಯ ಪ್ರಶಸ್ತಿ,   ಗುಣಸಾಗರಿ ನಾಗರಾಜ್ ದತ್ತಿ ಬಹುಮಾನ, ಮಹಿಳಾ ಪ್ರಶಸ್ತಿ, ಕಾವ್ಯ ಶ್ರೀ ಪ್ರಶಸ್ತಿ, ಸಾಹಿತ್ಯ ಸಿರಿಪ್ರಶಸ್ತಿ, ನೀಲಗಂಗಾ ದತ್ತಿ ಬಹುಮಾನ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ, ಶ್ರೀ ಜರಗನಹಳ್ಳಿ ಶಿವಶಂಕರ್ ಪ್ರಶಸ್ತಿ, ಶ್ರೀಮತಿ ಬಂದಮ್ಮ ಪ್ರಶಸ್ತಿ ಇತ್ಯಾದಿ ಪ್ರಶಸ್ತಿ ಹಾಗೂ ಸನ್ಮಾನಗಳಿಗೆ ಪಾತ್ರರಾಗಿದ್ದಾರೆ. ಇವರ ಕವನಗಳು ಕಥೆಗಳು ಲೇಖನಗಳು ರಾಜ್ಯಮಟ್ಟದ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಸುತ್ತೂರು ಶ್ರೀಮಠದ, ಶ್ರೀ ಸಿದ್ದಗಂಗಾ ಮಠದ, ಹಾಸನದ ಶ್ರೀ ಆದಿಚುಂಚನಗಿರಿ ಮಠದ, ಪುಷ್ಪಗಿರಿ ಮಠದ, ನಂದಿಗುಡಿ ಶ್ರೀ ಮಠದ, ಬಾಳೆಹೊನ್ನೂರು ಪೀಠ ಮುಂತಾದ ಶ್ರೀ ಪೀಠದ ಪರಮಪೂಜ್ಯರಗಳು ಆಶೀರ್ವಾದ ನೀಡಿ ಸನ್ಮಾನಿಸಿದ್ದಾರೆ. ವಿವಿಧ ಸಂಘ ಸಂಸ್ಥೆಗಳು ಇವರನ್ನು ಉಪನ್ಯಾಸಕ್ಕೆ ಆಹ್ವಾನಿಸಿ ಸನ್ಮಾನಿಸಿವೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರನ್ನು ಸನ್ಮಾನಿಸಿದ್ದಾರೆ. ಹೀಗೆ ಇವರ ಸಾಹಿತ್ಯ ಪಯಣ ಸಾಗುತ್ತಿದೆ.

ಹೀಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಬದುಕನ್ನು ರೂಪಿಸಿಕೊಂಡಿರುವ ಶ್ರೀಮತಿ ಸುಶೀಲಾ ಸೋಮಶೇಖರ್ ಅವರಿಗೆ ’ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ’ 2024ನೆಯ ಸಾಲಿನ ’ರಮಣಶ್ರೀ ಹಿರಿಯ ಶ್ರೇಣಿ ಶರಣ ಪ್ರಶಸ್ತಿ’ ನೀಡಲು ಹೆಮ್ಮೆಪಡುತ್ತವೆ.

ವಚನ ಸಂಗೀತ ಕ್ಷೇತ್ರ

ಶ್ರೀಮತಿ ಎಂ.ಎಸ್. ಶೀಲಾ

ಕರ್ನಾಟಕ ಸಂಗೀತಗಾರರ ನೆಲೆವೀಡು. ಸಂಗೀತದ ಎಲ್ಲಾ ಪ್ರಕಾರಗಳಲ್ಲೂ ಸಾಲಂಕೃತ ಸಾಧಕರು. ಸಪ್ತಸ್ವರಗಳನ್ನೇ ಸಾಧನೆಯ ಮೆಟ್ಟಿಲಾಗಿಸಿಕೊಂಡು ನಾದಕೀರ್ತಿ ಬೆಳಗಿದ ಸಂಗೀತಗಾರ್ತಿಯರು ಬಹುಮಂದಿ. ಆ ಪೈಕಿ ಶ್ರೀಮತಿ ಎಂ.ಎಸ್. ಶೀಲಾ ಅವರದ್ದು ಬಹುದೊಡ್ಡ ಹೆಸರು. ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರ ಕಂಡ ಅಪರೂಪದ ಗಾನಕಲಾಶ್ರೀ.

ಎಂ.ಎಸ್. ಶೀಲಾ ಸಂಗೀತ ಮನೆತನದ ಕುಡಿ. ತಾಯಿ ಎಂ.ಎಸ್. ರತ್ನ ಸಂಗೀತ ವಿದುಷಿ. ನಾದಪರಿಸರದಲ್ಲಿ ಅರಳಿದ ಶೀಲಾಗೆ ಅಮ್ಮನೇ ಮೊದಲ ಗುರು. ಆರ್.ಕೆ. ಶ್ರೀಕಂಠನ್‌ರ ಗರಡಿಯಲ್ಲಿ ಪ್ರಬುದ್ಧ ಸಂಗೀತ ಕಲಾವಿದೆಯಾಗಿ ರೂಪುಗೊಳ್ಳುವಿಕೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿ. ಚಿನ್ನದ ಪದಕ ವಿಜೇತೆ. ಶಾಸ್ತ್ರೀಯ ಸಂಗೀತದಷ್ಟೇ ಸುಗಮ ಸಂಗೀತದಲ್ಲೂ ಸಮಾನ ಹಿಡಿತ. ಎರಡೂ ಪ್ರಕಾರಗಳಲ್ಲಿ ಆಕಾಶವಾಣಿಯ ಟಾಪ್‌ ಶ್ರೇಣಿ (Rank) ಕಲಾವಿದೆಯಾಗಿರುವ ಅಪರೂಪದ ಸಾಧನೆ. ಆಕಾಶವಾಣಿಯ ರಾಷ್ಟ್ರೀಯ ಸಂಗೀತ ಸಮ್ಮೇಳನಗಳೂ ಸೇರಿದಂತೆ ದೇಶಾದ್ಯಂತ ನಿರಂತರ ಕಾರ್ಯಕ್ರಮ ನೀಡಿಕೆ.

ಅಮೇರಿಕಾ, ಕೆನಡಾ, ಲಂಡನ್ ಮತ್ತು ಮಧ್ಯಪೂರ್ವ ದೇಶಗಳಲ್ಲಿ ಕರ್ನಾಟಕ ಸಂಗೀತದ ಪರಂಪರೆ ಪರಿಚಯಿಸಿದ ಕೀರ್ತಿ.

ಧ್ವನಿಸುರುಳಿ ಮತ್ತು ಸಿಡಿ ಕ್ಷೇತ್ರದಲ್ಲಿ ಜನಪ್ರಿಯ ಹೆಸರು. ಲಲಿತಾ ಸಹಸ್ರನಾಮ, ಶ್ರೀ ಶಾರದಾ ಸುಪ್ರಭಾತ, ಗಾನ ಸುಶೀಲಂ,

ಆಡಿಸಿದಳೆಶೋದೆ, ಪಾಲಿಂಚು ಕಾಮಾಕ್ಷಿ, ಹರಿದಾಸ ನಮನ, ಸೌಂದರ್ಯ ಲಹರಿ, ಶಿವಾನಂದ ಲಹರಿ, ವಚನಾಮೃತ ಮುಂತಾದ ಧ್ವನಿಸುರುಳಿಗಳಿಗೆ ಇಂದಿಗೂ ಬಹುಬೇಡಿಕೆ. ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ ಸದಸ್ಯರಾಗಿ ಕ್ಷೇತ್ರ ಸೇವೆಗೈದಿರುವ ವಿದುಷಿ ಶೀಲಾ ತಮ್ಮದೇ ‘ಹಂಸಧ್ವನಿ ಕ್ರಿಯೇಷನ್ಸ್’ ಸಂಸ್ಥೆಯಡಿ ನಡೆಸಿದ ಹೊಸ ಪರಿಕಲ್ಪನೆಯ ಕಾರ್ಯಕ್ರಮಗಳು, ಜಯಚಾಮರಾಜೇಂದ್ರ ಒಡೆಯರ್ ಕೃತಿಗಳ ಸಿ.ಡಿ, ಪ್ರತಿ ವರ್ಷ ಸ್ವರಸಾಧಕರಿಗೆ ನೀಡುತ್ತಿರುವ ಹಂಸಧ್ವನಿ ಪುರಸ್ಕಾರ ಗಮನ ಸೆಳೆದಿರುವ ಹೊಸ ಹೆಜ್ಜೆ.

ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಅತ್ಯುತ್ತಮ ಹಿರಿಯ ಗಾಯಕಿ, ಅತ್ಯುತ್ತಮ ಚಲನಚಿತ್ರ ಹಿನ್ನೆಲೆ ಗಾಯಕಿ, ಕರ್ನಾಟಕ

ಸಂಗೀತ-ನೃತ್ಯ ಅಕಾಡೆಮಿಯ ಪ್ರಶಸ್ತಿ, ಶೃಂಗೇರಿ ಶಾರದಾ ಪೀಠದ ಆಸ್ಥಾನ ವಿದುಷಿ ಪ್ರಶಸ್ತಿ, ಗಾನವಾರಿಧಿ, ಸಂಗೀತ ಗಾನಕಲಾನಿಧಿ, ಸಂಗೀತ ಸಹ್ಯಾದ್ರಿ, ಸಂಗೀತ ವಾಗ್ದೇವಿ ಮತ್ತಿತರ ಬಿರುದುಗಳಿಗೆ ಸತ್ಪಾತ್ರರು. ಈ ಸ್ವರಸಾಧಕರಿಗೆ ೨೦೨೧-೨೨ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು ‘ನಿಜಗುಣ-ಪುರಂದರ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.

ದೇಶ-ವಿದೇಶಗಳಲ್ಲಿ ಸಂಗೀತ ಸೇವೆ ನೀಡುತ್ತಿರುವ ಶ್ರೀಮತಿ ಎಂ.ಎಸ್‌. ಶೀಲಾ ಅವರ ಸಾಧನೆಯನ್ನು ಗಮನಿಸಿ ’ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ’ 2024 ನೆಯ ಸಾಲಿನ ’ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಲು ಹೆಮ್ಮೆ ಪಡುತ್ತವೆ.

ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ

ಎಂ. ವಿ. ತ್ಯಾಗರಾಜ್

ಹೆಸರು : ಎಂ. ವಿ. ತ್ಯಾಗರಾಜ್
ಜನ್ಮ ದಿನಾಂಕ : ೨೨-೦೯-೧೯೬೩
ಜನ್ಮ ಸ್ಥಳ : ಹಾಸನ ಜಿಲ್ಲೆ, ಆಲೂರು ತಾಲೂಕಿನ ಮಂದಿರ ಗ್ರಾಮ
ಪ್ರಸ್ತುತ ೩೫ ವರ್ಷಗಳಿಂದ ಹೆಬ್ಬಾಳ ನಿವಾಸಿಯಾಗಿದ್ದಾರೆ.
ತಂದೆ-ತಾಯಿ : ಶ್ರೀಮತಿ ಗೌರಮ್ಮ ಮತ್ತು ವಿರೂಪಾಕ್ಷಪ್ಪರವರ ದ್ವಿತೀಯ ಪುತ್ರ
ವಿದ್ಯಾರ್ಹತೆ : ಒ. ಂ (ಕನ್ನಡ)
ವೃತ್ತಿ : ಸ್ವಂತ ಉದ್ಯೋಗ
ಪ್ರವೃತ್ತಿ : ಕನ್ನಡ ಪರ ಹೋರಾಟ, ಸಾಹಿತ್ಯಕೃಷಿ ಸಂಘಟನೆ, ಕರ್ನಾಟಕ ವಚನಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರು. ಪ್ರಕಾಶಕರಾಗಿ ೧೨೦ ಪುಸ್ತಕ ಲೋಕಾರ್ಪಣೆ ಮಾಡಿದ್ದಾರೆ. ಸ್ವತಃ ಲೇಖಕರಾಗಿ ಕಥೆÀ, ಕಾದಂಬರಿ, ಕವನ ಸಂಕಲನ, ಜೀವನ ಚರಿತ್ರೆ ಹೀಗೆ ವಿವಿಧ ಪ್ರಕಾರಗಳ ೪೩ ಕೃತಿಗಳನ್ನು ರಚಿಸಿದ್ದಾರೆ.

ಪ್ರಶಸ್ತಿ ಸನ್ಮಾನಗಳು :
ಕಳೆದ ೧೨ ವರ್ಷಗಳಿಂದ “ಅನನ್ಯ ನುಡಿ” ಎಂಬ ಕೌಟುಂಬಿಕ ಮಾಸ ಪತ್ರಿಕೆಯನ್ನು ರಾಜ್ಯಾದ್ಯಂತ ಹೊರತರುತ್ತಿದ್ದಾರೆ. ಜೊತೆಗೆ ಕಳೆದ ೧೦ ವರ್ಷಗಳಿಂದ
“ಕರ್ನಾಟಕ ವಚನಸಾಹಿತ್ಯ ಪರಿಷತ್ತು” ಎಂಬ ಸಂಸ್ಥೆಯನ್ನು ರಾಜ್ಯಾದ್ಯಂತ ಸಂಘಟಿಸಿ ಬಸವತತ್ವವನ್ನು ಮತ್ತು ನಿರ್ಲಕ್ಷಿತ ವಚನಕಾರರನ್ನು ಬೆಳಕಿಗೆ ತರುವ ಪ್ರಯತ್ನವನ್ನು ನಿರಂತರ ಮಾಡುತ್ತಿದ್ದಾರೆ. ಇದರ ಜೊತೆಗೆ ಸಮಾಜಮುಖಿಯಾದ ಹೋರಾಟ, ವಿವಿಧ ಸಂಸ್ಥೆಗಳಿಗೆ ಪೋಷಕರಾಗಿ, ಸಂಘಟನೆಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಪ್ರಶಸ್ತಿ ಹಾಗೂ ಗೌರವ ಸನ್ಮಾನಗಳು.
೧. ೨೦೧೪ ರಲ್ಲಿ ಡಾ.ಎಂ.ಜಿ.ದೇಶಪಾAಡೆ ಪ್ರತಿಷ್ಠಾನ ಬೀದರ್ ಇವರಿಂದ “ಪತ್ರಿಕಾ ರಂಗದ ಧೀಮಂತ ದುರಂದರ” ಪ್ರಶಸ್ತಿ ಗೌರವ.
೨. ೨೦೧೭ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮೈಸೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಗೌರವ ಸನ್ಮಾನ.
೩. ೨೦೧೭ ರಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ನಿಂದ “ನಿಜಶರಣೆ ಲೀಲಕ್ಕ” ಜೀವನ ಚರಿತ್ರೆ ಕೃತಿಗೆ ಪ್ರಶಸ್ತಿ.
೪. ೨೦೧೭ ರಲ್ಲಿ ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ “ಆದರ್ಶ ಕನ್ನಡಿಗ” ಪ್ರಶಸ್ತಿ.
೫. ೨೦೧೮ ರಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿಂದ “ಆನಂದ ಲಿಂಗೇಶ್ವರ” ಪ್ರಶಸ್ತಿ.
೬. ೨೦೧೮-೧೯ ರಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಆಹ್ವಾನಿತರಾಗಿ ಆಯ್ಕೆ
೭. ೨೦೧೯ ರಲ್ಲಿ ಅಖಿಲ ಕರ್ನಾಟಕ ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿ ಮತು ್ತ ಜಾನಪದ ಕಲಾವಿದರ ಸಂಘ ಬೆಂಗಳೂರು
ಇವರಿಂದ ಜೀವಮಾನ ಸಾಧನೆಗಾಗಿ “ವಚನಶಿ ್ರÔ ಪ್ರಶಸ್ತಿ ಪ್ರದಾನ.
೮. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಸಸ್ತಿ ಸಮಿತಿಯ ಸದಸ್ಯನಾಗಿ ಆಯ್ಕೆ
೯. ೨೦೨೦ ರಲ್ಲಿ ಹಾಸನಜಿಲ್ಲೆ ಆಲೂರು ತಾಲ್ಲೂಕು, ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆ.
೧೦. ಮೇಘ ಮೈತ್ರಿ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ೨೦೨೧ ರಲ್ಲಿ ನಡೆದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ.
೧೧. ಬೆಂಗಳೂರು ನಗರ ಜಿಲ್ಲೆ, ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಕನ್ನಡ ಸೇವೆ.
೧೨. ಬೆಂಗಳೂರು ಚುಟುಕು ಸಾಹಿತ್ಯ ಪರಿಷತ್ತಿನಿಂದ ೨೦೨೨ ರಲ್ಲಿ “ದಿ.ಹೆಚ್.ಎಸ್.ರೇಣುಕಾಪ್ರಸಾದ್” ಪ್ರಶಸ್ತಿ.
೧೩. ೨೦೨೨ ರಲ್ಲಿ ಕರ್ನಾಟಕ ರಾಜ್ಯ ಸ್ವಯಂ ಸೇವಾ ಒಕ್ಕೂಟದಿಂದ “ಬಸವ ಪ್ರಶಸ್ತಿ” ಪ್ರದಾನ.
೧೪. ೨೦೨೩ ರಲ್ಲಿ ಮಂದಾರ ಕಲಾವಿದರ ವೇದಿಕೆಯಿಂದ “ಶರಣ ಸೇವಾರತ್ನ” ಪ್ರಶಸ್ತಿ. ರಾಜ್ಯದ ವಿವಿಧ ಜಿಲ್ಲೆಗಳು, ತಾಲ್ಲೂಕುಗಳಲ್ಲಿ ಅಭಿಮಾನದಿಂದ ಬಸವಾಭಿಮಾನಿಗಳಿಂದ ಗೌರವ ಸನ್ಮಾನ ಲಭಿಸಿದೆ. ಅತ್ಯುತ್ತಮ ಸಂಘಟಕರಾಗಿ, ಉತ್ತಮ ವಾಗ್ಮಿಗಳಾಗಿ, ಬಸವತತ್ವ ಆರಾಧಕರಾಗಿ, ಜಾತ್ಯಾತೀತ ನಿಲುವುಗಳಿಂದ ರಾಜ್ಯದಲಿ ್ಲ ಅಪಾರ ಜನಮನ್ನಣೆ ಗಳಿಸಿದ್ದಾರೆ.

ಶ್ರೀ ಎಂ.ವಿ.ತ್ಯಾಗರಾಜ್ ಅವರ ’ರ‍್ನಾಟಕ ವಚನ ಸಾಹಿತ್ಯ ಪರಿಷತ್ತಿ’ನ ಸಾಧನೆಯನ್ನು ಗುರುತಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ೨೦೨೪ನೆಯ ಸಾಲಿನ ’ರಮಣಶ್ರೀ ಶರಣ ಹಿರಿಯ ಶ್ರೇಣಿ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲು ಅಭಿಮಾನ ಪಡುತ್ತದೆ.

ರಮಣಶ್ರೀ ಶರಣ ಪ್ರಶಸ್ತಿಗಳು

ಉತ್ತೇಜನ ಪ್ರಶಸ್ತಿ

ಶರಣ  ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮಾರ್ಗವನ್ನು ತೋರಿದ ಮತ್ತು ಇತರರಿಗೆ ಪ್ರೇರೇಪಿಸುವ ವ್ಯಕ್ತಿಗಳನ್ನು ಗೌರವಿಸಲಾಯಿತು.

ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರ

ಡಾ. ಅಂದಯ್ಯ ಅರವಟಗಿಮಠ

ಗದಗ ಜಿಲ್ಲೆಯ ರೋಣ ತಾಲೂಕಿನ ಡ. ಸ. ಹಡಗಲಿಯಲ್ಲಿ ಜುಲೈ ೨೬, ೧೯೯೩ರಂದು ಜನನ. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದವರು. ಬೆಳಗಾವಿಯ ಸರ್ಕಾರಿ ಸದಾರ‍್ಸ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಪೂರೈಸಿದ ಇವರು ಸ್ನಾತಕ ಪದವಿಯನ್ನು ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಗದಗದಲ್ಲಿ ಪಡೆದುಕೊಂಡಿದ್ದಾರೆ, ಸ್ನಾತಕೋತ್ತರ ಕನ್ನಡ ಪದವಿಯನ್ನು ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಅಧ್ಯಯನ ಮಾಡಿದ್ದಾರೆ. ರಾಜ್ಯ ಮತ್ತು ರಾಷ್ಟಿçÃಯ ಮಟ್ಟದ ಉಪನ್ಯಾಸಕರ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡಿರುವ ಇವರು ಸ್ನಾತಕೋತ್ತರ ಪತ್ರಿಕೋಧ್ಯಮ ಡಿಪ್ಲೋಮಾ ಪದವೀಧರರು ಕೂಡ.

ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ವೆಂಕಟಗಿರಿ ದಳವಾಯಿಯವರ ಮಾರ್ಗದರ್ಶನದಲ್ಲಿ ‘ಕನ್ನಡ ವಚನ ವಿಮರ್ಶೆಗಳ ತಾತ್ವಿಕ ನೆಲೆಗಳು’ ಎಂಬ ವಿಷಯದ ಕುರಿತಾದ ಅಧ್ಯಯನವನ್ನು ಪೂರ್ಣಕಾಲಿಕವಾಗಿ ಕೈಗೊಂಡು ಪಿಎಚ್.ಡಿ ಪದವಿ ಪಡೆದುಕೊಂಡಿದ್ದಾರೆ. ಮಹಾಪ್ರಬಂಧದ ಮೌಲ್ಯಮಾಪಕರು ಗುರುತಿಸುವಂತೆ ‘ಕನ್ನಡ ವಿಮರ್ಶಾ ಮಾನದಂಡಗಳು, ಗ್ರಹಿಕೆಗಳು, ಪರಿಕಲ್ಪನೆಗಳು, ತಾತ್ವಿಕತೆಗಳು ಕಾಲದಿಂದ ಕಾಲಕ್ಕೆ ಬದಲಾದ ಪರಿಯನ್ನು ವಚನಗಳ ಓದಿನ ಹಿನ್ನಲೆಯಲ್ಲಿ ಸ್ಪಷ್ಟವಾಗಿ ಸಂಶೋಧಕರು ದಾಖಲಿಸುತ್ತಾರೆ. ಮುಖ್ಯನೆಲೆಯ ಸಾಹಿತ್ಯ ವಿಮರ್ಶೆಯ ಮಾನದಂಡಗಳಿಗೆ ತಕ್ಕಂತೆ ವಚನಗಳ ವಿಮರ್ಶೆಯೂ ಹಲವು ಪಲ್ಲಟಗಳನ್ನು ಹೊಂದಿದೆ. ಅಂತಹ ಹಾದಿಯನ್ನು ಗುರುತಿಸುವ ಪ್ರಯತ್ನದೊಂದಿಗೆ ವಚನ ಅಧ್ಯಯನಗಳು ವರ್ತಮಾನದಲ್ಲಿ ಕಂಡುಕೊಳ್ಳಬೇಕಿರುವ ಹಾದಿಗಳ ಕುರಿತಾಗಿಯೂ ಇವರಲ್ಲಿ ಉತ್ತರವುಂಟು’ ಎನ್ನುವ ಮಾತುಗಳು ಅವರ ಬರಹದ ಮಹತ್ವ ಮನಗಾಣಿಸುತ್ತವೆ.

ಕನ್ನಡದ ಪ್ರಮುಖ ದಿನಪತ್ರಿಕೆ, ಸಂಶೋಧನ ನಿಯತಕಾಲಿಕೆಗಳಲ್ಲಿ, ಜಾಲತಾಣಗಳಲ್ಲಿ ಇವರ ಹಲವು ಬರೆಹಗಳು ಪ್ರಕಟಗೊಂಡಿವೆ. ಅವುಗಳಲ್ಲಿ ಮುಖ್ಯವಾದವು : ವಚನಗಳ ಓದು ಪರಂಪರೆ : ಮರು ಪರಿಶೀಲನೆ, ವಚನಕಾರರ ಸಾಂಸ್ಕೃತಿಕ ನಕಾಶೆ, ಅಧುನಿಕ ವಚನ ಅಧ್ಯಯನಗಳ ವೈಧಾನಿಕತೆ, ವಚನ ಸಾಹಿತ್ಯ ಮತ್ತು ಮಹಿಳೆ : ಸಮಾನತೆಯ ಓದು, ದಲಿತ ವಿಮರ್ಶೆ : ವಚನ ಸಾಹಿತ್ಯ, ವಚನಕಾರರ ಕಾಯಕ ಸಿದ್ಧಾಂತ : ಭಿನ್ನ ನೋಟಗಳು, ವಚನಕಾರರ ನಡುವಿನ ಭಿನ್ನದ್ವನಿಯಾಗಿ ಗಜೇಶ ಮಸಣಯ್ಯಗಳ ಪುಣ್ಯಸ್ತಿçà ಮಸಣಮ್ಮ, ವಿದ್ವತ್ ಕೈಪಿಡಿ ಕೃತಿ : ಆರ್. ಸಿ. ಹಿರೇಮಠರ ವಚನ ಸಾಹಿತ್ಯ ಸಂಪಾದನೆ, ವಚನ ಸಂಶೋಧಕ ಶಿ.ಶಿ. ಬಸವನಾಳರು ಮುಂತಾದ ಬರೆಹಗಳು ಮುಖ್ಯವಾದವು.

ಸಾಹಿತ್ಯದ ಅಪ್ಪಟ ವಿದ್ಯಾರ್ಥಿಯಾಗಿ ಕಥೆ, ಲಲಿತಪ್ರಬಂಧಗಳAತಹ ಸೃಜನಶೀಲ ಬರಹಗಳೊಂದಿಗೆ ವಚನ ಅಧ್ಯಯನದತ್ತ ಹೆಚ್ಚು ಆಸಕ್ತರು. ವಚನ ಸಂಶೋಧಕರಿಗೆ ಚಿತ್ರದುರ್ಗದ ಮುರುಘಾಮಠ ನೀಡುವ ‘ಡಾ.ಎಂ.ಎA.ಕಲಬುರ್ಗಿ ಶಿಷ್ಯವೇತನ’ ಪುರಸ್ಕೃತರು. ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯಧನದೊಂದಿಗೆ ಇವರ ‘ನೀರೆಲ್ಲವೂ ತೀರ್ಥ’ ವಿಮರ್ಶಾ ಸಂಕಲನ ಪ್ರಕಟಗೊಂಡಿದೆ. ಅಕ್ಷರ ಸಂಗಾತ ಕಥಾ ಸ್ಪರ್ಧೆಯಲ್ಲಿ ಒಪ್ಪಿತ ಕಥೆ, ಕನ್ನಡ ವಿದ್ಯಾವರ್ಧಕ ಸಂಘ ಕೊಡಮಾಡುವ ‘ಶಾಂತಾದೇವಿ ಕಣವಿ ಕಥಾ ಪುರಸ್ಕಾರ’ ಇವರಿಗೆ ದೊರತಿದೆ. ಕೃಷಿ, ಸಂಚಾರ, ಅಧ್ಯಾಪನ ಇವರ ಇನ್ನೀತರ ಇಷ್ಟಗಳು. ಸದ್ಯ ಗದುಗಿನ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ನುಡಿಗುರುವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ಅಂದಯ್ಯ ಅರವಟಗಿಮಠ ಅವರ ಸಾಧನೆಯನ್ನು ಗುರುತಿಸಿ, ’ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು’ ಮತ್ತು ’ರಮಣಶ್ರೀ ಪ್ರತಿಷ್ಠಾನ’ ೨೦೨೪ ನೆಯ ಸಾಲಿನ ’ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಲು ಹೆಮ್ಮೆ ಪಡುತ್ತವೆ.

ಆಧುನಿಕ ವಚನ ರಚನೆ

ಡಾ. ಕಾತ್ಯಾಯಿನಿ ಕುಂಜಿಬೆಟ್ಟು

ಮೂಲತಃ ಉಡುಪಿಯ ಕರಂದಾಡಿಯವರು. ಕಾದಂಬರಿ, ಕತೆ, ಕವಿತೆ, ವಿಮರ್ಶೆ, ನಾಟಕ, ಅಂಕಣ ಬರಹ, ಮಕ್ಕಳ ನಾಟಕ, ಜೀವನ ಚರಿತ್ರೆ, ವಾಚಿಕೆ, ಅನುವಾದ, ಸಂಶೋಧನೆ… ಸಾಹಿತ್ಯದ ಹೆಚ್ಚಿನ ಪ್ರಕಾರಗಳಲ್ಲಿ ಇದುವರೆಗೆ ಇವರ 32 ಕೃತಿಗಳು ಪ್ರಕಟವಾಗಿವೆ.

ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಸಾಹಿತ್ಯ ಅಕಾಡೆಮಿಯ ಬಹುಮಾನಗಳು, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳು, ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ‘ಕನಕ ಯುವ ಪುರಸ್ಕಾರ’, ಕ.ಸಾ.ಪ ಅರಳು ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಯುವ ವರ್ಧಮಾನ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಬಸವರಾಜ ಕಟ್ಟೀಮನಿ ಪ್ರಶಸ್ತಿ, ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ, ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ, ಎಂ.ಕೆ ಇಂದಿರಾ ಮಹಿಳಾ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಮಹಿಳಾ ದತ್ತಿನಿಧಿ ಪ್ರಶಸ್ತಿ, ಎಸ್.ಯು. ಪಣಿಯಾಡಿ ಕಾದಂಬರಿ ಪ್ರಶಸ್ತಿ… ಮುಂತಾದ ಪ್ರಶಸ್ತಿಗಳಿಗೆ ಇವರ ಕೃತಿಗಳು ಪಾತ್ರವಾಗಿವೆ.

ಉತ್ತರಾದಿ ಸಂಗೀತದಲ್ಲಿ ಮುಂಬೈ ಅಖಿಲ ಭಾರತ ಗಂಧರ್ವ ವಿಶ್ವವಿದ್ಯಾಲಯದಿಂದ ‘ಗಾಯನ ವಿಶಾರದ ‘ ಪದವಿ ಪಡೆದಿರುವ ಇವರು ಉಡುಪಿಯ ಮಹಾತ್ಮಾ ಗಾಂಧಿ ಕಾಲೇಜಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಚನ ಸಾಹಿತ್ಯ ಕ್ಷೇತ್ರ
1.) ಬಸವ ಸಮಿತಿ ಬೆಂಗಳೂರು, ‘ವಚನಗಳ ಬಹುಭಾಷಾ ಅನುವಾದ ಯೋಜನೆ-2013’ ಡಾ.ಎಂ.ಎಂ.ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ ಡಾ.ವಿವೇಕ್ ರೈಯವರ ತುಳು ಸಂಪಾದಕತ್ವದಲ್ಲಿ ಶಿವಶರಣ – ಶರಣೆಯರ ವಚನಗಳನ್ನು ತುಳುವಿಗೆ ಅನುವಾದಿಸಿರುವುದು.
2.) ಡಿ.26, 2017ರಂದು ಬಸವ ಸಮಿತಿ ಬೆಂಗಳೂರು, ‘ವಚನಗಳ ಬಹುಭಾಷಾ ಅನುವಾದ ಯೋಜನೆ – 2013’ – ವಚನಗಳ ತುಳು ಅನುವಾದ ಕಾರ್ಯಕ್ಕಾಗಿ ಬಸವ ಸಮಿತಿ ಬೆಂಗಳೂರು ಮತ್ತು ಕರ್ನಾಟಕ ತುಳು ಅಕಾಡೆಮಿ ಮಂಗಳೂರು ಸಹಯೋಗದಲ್ಲಿ ಡಾ.ವೀರೇಂದ್ರ ಹೆಗ್ಗಡೆಯವರು ಹಾಗೂ ಅರವಿಂದ ಜತ್ತಿಯವರು ಸನ್ಮಾನಿಸಿರುವುದು.
3.) ಫೆ. 27,2021 ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು (ರಿ) ನವದೆಹಲಿ, ‘ಭಾರತೀಯ ಭಾಷೆಗಳು ಮತ್ತು ವಚನ ಸಾಹಿತ್ಯ’ ಈ ಕುರಿತು ಆನ್ಲೈನ್ ಉಪನ್ಯಾಸ ನೀಡಿರುವುದು.
4.) ನ. 26, 2019 ರಲ್ಲಿ, ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ (ರಿ) ಮಂಗಳೂರು ಮತ್ತು ಕ.ಸಂ. ಇಲಾಖೆ ಮಂಗಳೂರು – ಕೊಡಿಯಾಲ ಬೈಲಿನ ಶಾರದಾ ವಿದ್ಯಾಲಯದಲ್ಲಿ ಆಚರಿಸಿದ 5 ನೇ ವಚನ ಸಂಭ್ರಮದಲ್ಲಿ ‘ವಚನಗಳಲ್ಲಿ ಜೀವನ ಮೌಲ್ಯ’ ಉಪನ್ಯಾಸ,
5.) ‘ಅಕ್ಕ ಕೇಳವ್ವ’ ವಚನ ಗಾಯನ ಸರಣಿ – 1, 2, 3, 4 ಅಕ್ಕಮಹಾದೇವಿಯ ವಚನಗಳನ್ನು ಹಾಡಿ ಯುಟ್ಯೂಬಲ್ಲಿ ಪ್ರಸಾರ.
6.) ಗುರುರಾಜ್ ಮಾರ್ಪಳ್ಳಿಯವರ ‘ನಿನಾದ’ ಭಾವಗೀತೆ ತಂಡದ ಮೂಲಕ ರಾಜ್ಯದಾದ್ಯಂತ ಶಾಲೆ, ಕಾಲೇಜು ಹಾಗೂ ವಿವಿಧ ಸಂಸ್ಥೆಗಳಲ್ಲಿ ನಡೆದ 100ಕ್ಕೂ ಹೆಚ್ಚು ಭಾವಗಾಯನ ಕಾರ್ಯಕ್ರಮಗಳಲ್ಲಿ ‘ಅಕ್ಕ, ಬಸವಣ್ಣ, ಅಲ್ಲಮ ‘ ರ ವಚನಗಳನ್ನು ಕೂಡ ಹಾಡಿರುವುದು.
7.) ಉದಯವಾಣಿಯ ಮಹಿಳಾ ಸಂಪದಕ್ಕೆ ಪ್ರತಿವಾರ ಬರೆಯುವ ‘ಅಕ್ಕ ಕೇಳವ್ವ’ (ಡಿ.2017-2018) ಅಂಕಣ ಬರಹದಲ್ಲಿ ಅಕ್ಕಮಹಾದೇವಿಯನ್ನು ಕೇಂದ್ರವಾಗಿರಿಸಿಕೊಂಡು ಲೇಖನಗಳನ್ನು ಬರೆದಿರುವುದು – ಈ ಲೇಖನಗಳು ಮುಂದೆ ಗುಲ್ಬರ್ಗಾ ವಿ.ವಿ ಪ್ರಸಾರಾಂಗದಿಂದ ‘ಅಕ್ಕ ಕೇಳವ್ವ’ 2018-19 ರಲ್ಲಿ ಪ್ರಕಟವಾಗಿದೆ. (ಈ ಕೃತಿಯ ಪ್ರತಿಯೊಂದು ಲೇಖನದ ಕೊನೆಯಲ್ಲಿ ‘ಅಕ್ಷರ ಕಾತೀಶ್ವರ’ ಅಂಕಿತದಲ್ಲಿ ಆಧುನಿಕ ವಚನಗಳಿವೆ.)
8.) ಹಲವು ಶಾಲೆ ಕಾಲೇಜುಗಳಲ್ಲಿ ವಚನಗಳ ಕುರಿತು ಉಪನ್ಯಾಸ.
9.) ‘ಅಕ್ಷರ ಕಾತೀಶ್ವರ’ ಅಂಕಿತದಲ್ಲಿ ಆಧುನಿಕ ವಚನಗಳನ್ನು ಬರೆದಿದ್ದು, ‘ಅಕ್ಕ ಕೇಳವ್ವ – ಆಧುನಿಕ ವಚನಗಳು ‘ ಎಂಬ ಕೃತಿ 2024 ರಲ್ಲಿ ಪ್ರಕಟವಾಗಿದೆ.
10.) ಜೂನ್ 22, 2020 ಆಧುನಿಕ ವಚನಕಾರರಾದ ಮಧುರಚೆನ್ನರ ಕೃತಿಗಳ ಕುರಿತು ಆನ್ಲೈನ್ ಉಪನ್ಯಾಸ.
11.) ಮೇ.23,2024 ಚಂದನ ವಾಹಿನಿಯ ಶುಭೋದಯ ಕರ್ನಾಟಕದಲ್ಲಿ ಅಕ್ಕಮಹಾದೇವಿಯ ಎರಡು ವಚನಗಳ ಗಾಯನ ಹಾಗೂ ವಿಶ್ಲೇಷಣೆ.

ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಸಾಧನೆಯನ್ನು ಪರಿಗಣಿಸಿ, ’ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು’ ಮತ್ತು ’ರಮಣಶ್ರೀ ಪ್ರತಿಷ್ಠಾನ’ 2024 ನೆಯ ಸಾಲಿನ ’ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಲು ಹೆಮ್ಮೆ ಪಡುತ್ತವೆ.

ವಚನ ಸಂಗೀತ ಕ್ಷೇತ್ರ

ಡಾ. ರಂಜನಿ ವಾಸುಕಿ ಮತ್ತು ಶ್ರೀಮತಿ ವಡವಾಟಿ ಶಾರದಾ ಭರತ್

ಡಾ. ರಂಜನಿ ವಾಸುಕಿ
(ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯಕಿ)

ಡಾ. ರಂಜನಿ ವಾಸುಕಿ ಅವರು ಸಂಗೀತ ಚೂಡಾಮಣಿ ಗಾನಕಲಾಭೂಷಣ ಡಾ. ನಾಗವಲ್ಲಿ ನಾಗರಾಜ್ ಅವರ ಪುತ್ರಿ ಮತ್ತು ಶಿಷ್ಯೆ. ಇವರ ಅಪರೂಪದ ಮಾಧುರ್ಯ ಮತ್ತು ಸಾಮರ್ಥ್ಯದ ಕಲಾವಂತಿಕೆಯಿಂದ ಕರ್ನಾಟಕದ ಸಂಗೀತ ಪ್ರೇಮಿಗಳಲ್ಲಿ ಮನೆಮಾತಾಗಿದ್ದಾರೆ. ಡಾ. ರಂಜನಿಯವರು ಜನಿಸಿರುವುದು ಸಂಗೀತದ ಕುಟುಂಬದಲ್ಲಿ. ಇವರ ಸಂಗೀತ ಪರಂಪರೆ ಮುತ್ತಾತ ಶ್ರೀ ಕೊಳತ್ತೂರು ರಾಮಕೃಷ್ಣ ಶಾಸ್ತ್ರಿಗಳಿಂದ ಚಿಗುರಿತು. ಇವರು ವಾಗ್ಗೇಯಕಾರರಾಗಿ 72 ಮೇಳಕರ್ತ ರಾಗಗಳಲ್ಲಿಯೂ ಕೃತಿಗಳನ್ನು ರಚಿಸಿದ್ದಾರೆ. ಇವರ ತಾತ ಶ್ರೀ ಕೆ.ಎಸ್. ಸತ್ಯನಾಥ್ರವರು ಕೂಡ ಸಂಗೀತ ಸಂಯೋಜಕರಾಗಿದ್ದರು. ಸಂಗೀತದ ಕುಟುಂಬದಲ್ಲಿ ಜನಿಸಿದ ರಂಜನಿ ಅವರಿಗೆ ನೈಸರ್ಗಿಕವಾಗಿ ಸಂಗೀತದತ್ತ ಒಲವು ಹರಿಯಿತು. ಇವರು ತಮ್ಮ ೪ನೇ ವಯಸ್ಸಿನಲ್ಲಿ ಕಛೇರಿ ನೀಡಲು ಪ್ರಾರಂಭಿಸಿದರು. ಇವರು ತ್ರಿಸ್ಥಾಯಿಗಳಲ್ಲಿಯೂ ಲೀಲಾಜಾಲವಾಗಿ ಹಾಡಬಲ್ಲಂಥ ಕಂಠಶ್ರೀಯನ್ನು ದೈವದತ್ತವಾಗಿ ಪಡೆದಿದ್ದಾರೆ. ಅತಿಶಯ ಬಿರ್ಕಾ ಮತ್ತು ಮಾಧುರ್ಯ ಮಿಶ್ರಿತ ಭಾವನಾ ಶುದ್ಧ ಸಂಗೀತದಡೆಗೆ ರಂಜನಿಯನ್ನು ಅವರ ತಾಯಿ ಮತ್ತು ಗುರು ಡಾ.ನಾಗವಲ್ಲಿಯವರು ತಯಾರಿ ಮಾಡಿದ್ದಾರೆ. ಕರ್ನಾಟಕ ಸಂಗೀತದಲ್ಲಿ ಬಲವಾದ ನೆಲೆಗಟ್ಟು ಮತ್ತು ಇತರ ಶಾಸ್ತ್ರೀಯ ಸಂಗೀತದ ಬಗೆಗಿನ ಮುಕ್ತ ಮನಸ್ಸಿನ ಒಲವು ರಂಜನಿಯವರಿಗೆ ಅಧ್ಯಯನ-ಸಾಧನೆ ಮಾಡಲು ಸಹಾಯ ಮಾಡಿದೆ.

ಇವರು ಏಕವ್ಯಕ್ತಿಯಾಗಿ ಹಾಗೂ ತಾಯಿಯೊಂದಿಗೆ 2000+ ಸಂಗೀತ ಕಚೇರಿಗಳನ್ನು ನೀಡಿದ್ದಾರೆ. ಇವರು ದೇಶ ಮತ್ತು ವಿದೇಶದ ಎಲ್ಲಾ ಗೌರವಾನ್ವಿತ ಸಂಸ್ಥೆಗಳಲ್ಲಿ, ಹಲವಾರು ರಾಷ್ಟ್ರೀಯ ಸಮ್ಮೇಳನಗಳು ಮತ್ತು ಉತ್ಸವಗಳಲ್ಲಿ ಪ್ರದರ್ಶನಗಳನ್ನು ನೀಡಿದ್ದಾರೆ. ಅವರ ಸಂಶೋಧನಾ ಪ್ರಬಂಧಗಳು ಅಂತರ್ರಾಷ್ಟ್ರೀಯ ಸಂಶೋಧನಾ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ.

ಡಾ.ರಂಜನಿ ವಾಸುಕಿ ಅವರು 2012 ವರ್ಷದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ First Rank ಮತ್ತು 3 ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಕರ್ನಾಟಕ ಶಿಕ್ಷಣ ಮಂಡಳಿ ನಡೆಸಿದ ಜೂನಿಯರ್ ಮ್ಯೂಸಿಕ್ ಪರೀಕ್ಷೆ ಮತ್ತು ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ Rank ಪಡೆದಿದ್ದಾರೆ. ಮಾನವ ಸಂಪನ್ಮೂಲ ಸಚಿವಾಲಯ (UGC) ನಡೆಸುವ NET (ಸಂಗೀತ) ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿ ಪಿ.ಎಚ್.ಡಿ ಮಾಡಲು 5 ವರ್ಷಗಳ ಅವಧಿಗೆ ಸಂಶೋಧನಾ ಫೆಲೋಶಿಪ್ ಪಡೆದರು. 2022 ಇಸವಿಯಲ್ಲಿ ಗಮಕಗಳ ಸೌಂದರ್ಯದ ಸಂಶ್ಲೇಷಣೆಗೆ ಸಂಬಂಧಿಸಿದಂತೆ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದಿದ್ದಾರೆ.

ನ್ಯೂಜೆರ್ಸಿ 2010ರಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಕರ್ನಾಟಕ ಸರ್ಕಾರದಿಂದ ಡಾ. ರಂಜನಿ ವಾಸುಕಿ ಅವರನ್ನು ಆಯ್ಕೆ ಮಾಡಲಾಯಿತು. ಅವರು ಆಕಾಶವಾಣಿ, ದೂರದರ್ಶನ, ಉದಯ ಟಿ.ವಿ., Etv ಗಳಲ್ಲಿಯೂ ಪ್ರದರ್ಶನ ನೀಡಿದ್ದಾರೆ.

ಶೈಕ್ಷಣಿಕವಾಗಿ Computer Science Engineer ಆಗಿರುವ ರಂಜನಿ ಅವರು Infosys ಅಲ್ಲಿ ನಾಲ್ಕು ವರ್ಷಗಳ ಅವಧಿ ಸೇವೆ ಸಲ್ಲಿಸಿದ್ದಾರೆ. ಡಾ. ರಂಜನಿ ವಿದ್ಯಾರ್ಥಿಗಳು ದೇಶ ಮತ್ತು ವಿದೇಶಗಳಲ್ಲಿ ವ್ಯಾಪಿಸಿದ್ದಾರೆ. ಇವರು ಅನೇಕ ಮ್ಯೂಸಿಕ್ ಆಲ್ಬಮ್ ಗಳನ್ನು ನಿರ್ಮಿಸಿದ್ದಾರೆ. ಹಲವಾರು ಬಾರಿ ಮಾಧ್ಯಮಗಳು ಮತ್ತು ಪತ್ರಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಗಮಕ (ಕಾವ್ಯ ವಾಚನ), ವಚನ ಸಂಗೀತ, ಶಾಸ್ತ್ರೀಯ ಚಲನಚಿತ್ರ ಗಾಯನ, ಲಘು ಸಂಗೀತ, ಭಕ್ತಿ ಸಂಗೀತ ಮತ್ತು ನಾಮಸಂಕೀರ್ತನೆಯನ್ನು ಅತಿ ವಿಭಿನ್ನವಾಗಿ ನಿರ್ವಹಿಸುತ್ತಾರೆ. ಡಾ.ರಂಜನಿ ವಾಸುಕಿ ಅವರು “ರಾಗವಲ್ಲಿ ಫೈನ್ ಆರ್ಟ್ಸ್ ಫೌಂಡೇಶನ್” ಎಂಬ ಕಲಾಸಂಸ್ಥೆಯ ಸ್ಥಾಪಕ ಹಾಗೂ ಸೃಜನಶೀಲ ನಿರ್ದೇಶಕರಾಗಿದ್ದಾರೆ.

ಪ್ರಶಸ್ತಿಗಳು:-
1. ’ಅನನ್ಯ ಯುವ ಪುರಸ್ಕಾರ’ – 2019 ಅನನ್ಯ ಅಕಾಡೆಮಿ.
2. ’ನಾದಜ್ಯೋತಿ ಯುವ ಪುರಸ್ಕಾರ’ –2023 ನಾದಜ್ಯೋತಿ ತ್ಯಾಗರಾಜ ಭಜನಾ ಸಭಾ
3. ’ಪ್ರತಿಭಾಕಾಂಕ್ಷಿ ಪ್ರಶಸ್ತಿ’ – 2003 ಶ್ರೀ ರಾಮಸೇವಾಮಂಡಳಿ.
4. ’ಅನನ್ಯ ನಾದಜ್ಯೋತಿ ಕಲಾ ಪ್ರತಿಭಾ ಪುರಸ್ಕಾರ’ -2011 ನಾದಜ್ಯೋತಿ ಸಭಾ ಮತ್ತು ಅನನ್ಯ.
5. ‘ಚಾಂಪಿಯನ್ ಆಫ್ ಮ್ಯೂಸಿಕ್’ –1998 ಗಾಯನ ಸಮಾಜದಲ್ಲಿ ಡಾ.ಟಿ.ವಿ. ಗೋಪಾಲಕೃಷ್ಣನ್ ಅವರಿಂದ ಟ್ರೋಫಿಯನ್ನು ಪಡೆದರು.
6. ‘ಶ್ರೀವಾದಿರಾಜಾನುಗ್ರಹ ಕಲಾ ಪುರಸ್ಕಾರ’ – ಅಖಿಲ ಕರ್ನಾಟಕ ಹರಿದಾಸ ತತ್ವಜ್ಞಾನ ಪ್ರತಿಷ್ಠಾನ ನಂಜನಗೂಡು 2009.

ಡಾ.ರಂಜನಿ ವಾಸುಕಿಯವರ ಸಂಗೀತ ಸೇವೆಯನ್ನು ಗುರುತಿಸಿ, ’ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು’ ಮತ್ತು ’ರಮಣಶ್ರೀ ಪ್ರತಿಷ್ಠಾನ’ ಗಳು 2024 ನೆಯ ಸಾಲಿನ ’ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಲು ಹೆಮ್ಮೆ ಪಡುತ್ತವೆ.

ಶ್ರೀಮತಿ ವಡವಾಟಿ ಶಾರದಾ ಭರತ್

ಖ್ಯಾತ ಹಿಂದೂಸ್ಥಾನಿ ಶಾಸ್ತಿçÃಯ ಸಂಗೀತ ಗಾಯಕರಾದ ಗಾನ ಕಲಾ ಭೂಷಣೆ ಶ್ರೀಮತಿ ವಡವಾಟಿ ಶಾರದಾ ಭರತ್, ಗ್ವಾಲಿಯರ್ & ಜೈಪುರ್ ಘರಾನೆಯನ್ನು, ತಂದೆಯವರಾದ ಅಂತರರಾಷ್ಟಿçÃಯ ಖ್ಯಾತ ಕ್ಲಾರಿಯೋನೆಟ್ ವಾದಕರಾದ ಡಾ. ಪಂ. ನರಸಿಂಹಲು ವಡವಾಟಿಯವರಿಂದ ಹಾಗೂ ಮಹಾರಾಷ್ಟದ ಶಿವಾಜಿ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಡೀನ್ ಡಾ. ಭಾರತೀ ವೈಶಂಪಾಯನ ಅವರಿಂದ ಗುರುಕುಲ ಪದ್ಧತಿಯಲ್ಲಿ ಸಂಗೀತ ಅಭ್ಯಾಸ ಮಾಡಿದ್ದಾರೆ.

ವಚನ ಗಾಯನಕ್ಕೆ ವಿಶೇಷ ಪಂಕ್ತಿ ಹಾಕಿಕೊಟ್ಟ ಪಂ.ಶ್ರೀ ಸಿದ್ಧರಾಮ ಜಂಬಲದಿನ್ನಿಯವರ ವಚನ ಶೈಲಿಯನ್ನು, ತಂದೆಯ ಮೂಲಕ ಹಿಂದೂಸ್ಥಾನಿ ಶಾಸ್ತಿçÃಯ ಸಂಗೀತದ ಜೊತೆಗೆ ವಚನಗಳನ್ನು ವಿಶೇಷ ಶೈಲಿಯಲ್ಲಿ ಹಾಡುವ ರಾಜ್ಯದ ಖ್ಯಾತ ಗಾಯಕಿ ಆಗಿದ್ದಾರೆ. ಮಹಾರಾಷ್ಟçದ ನಾಗಪುರದಲ್ಲಿ ’ಸೌತ್ ಸೆಂಟ್ರಲ್ ಜೋನ್ ಕಲ್ಚರಲ್ ಸೆಂಟರ್’ ಏರ್ಪಡಿಸಿದ್ದ ೧೩ನೇ ಯುವ ಸಂಗೀತ ನೃತ್ಯ ಮಹೋತ್ಸವದಲ್ಲಿ ಹಿಂದೂಸ್ಥಾನಿ ಶಾಸ್ತಿçÃಯ ಸಂಗೀತದಲ್ಲಿ ಮೊದಲ ಬಹುಮಾನ ಪಡೆದುಕೊಂಡಿರುತ್ತಾರೆ.

ಶಾರದಾ ರಾಜ್ಯಮಟ್ಟದ ಸೀನಿಯರ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದಿದ್ದಾರೆ. ಸೆಂಟ್ರಲ್ ಸ್ಕಾಲರ್ಷಿಪ್ ಹಾಗೂ ನ್ಯಾಷಿನಲ್ ಸ್ಕಾಲರ್ಷಿಪ್ ಪುರಸ್ಕöÈತರು. ವಿಶೇಷವಾಗಿ ವಚನ ಗಾಯನದಲ್ಲೇ ಆಕಾಶವಾಣಿಯ “ಎ” ಗ್ರೇಡ್ ಕಲಾವಿದರು. ದೇವರ ನಾಮದ “ಬಿ ಹೈ” ಗ್ರೇಡ್ ಕಲಾವಿದರು. ಹಿಂದೂಸ್ಥಾನಿ ಶಾಸ್ತಿçÃಯ ಸಂಗೀತ ಮತ್ತು ಬಸವೇಶ್ವರರ ವಚನಗಳ “ಮಾನ್ಸೂನ್”, “ಶ್ರೀ ವಚನಾಮೃತ”, “ಸಂಗನ ಬಸವ” ಇತ್ಯಾದಿ ಧ್ವನಿ ಸುರುಳಿಗಳು ಜನಪ್ರಿಯಗೊಂಡಿವೆ.

ಕರ್ನಾಟಕ ಸರ್ಕಾರ ಶ್ರೀಮತಿ ವಡವಾಟಿ ಶಾರದಾ ಭರತ್ ಅವರನ್ನು ೨೦೧೪ ರಿಂದ೨೦೧೭ರ ಅವಧಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರನ್ನಾಗಿ ನೇಮಿಸಿತ್ತು. ರಾಮನಗರ ಜಿಲ್ಲೆ ಎಂದು ನಾಮಕರಣವಾದ ನಂತರ ನೇಮಕವಾದ ಮೊದಲ ಸದಸ್ಯರಾಗಿ, ರಾಮನಗರ ಜಿಲ್ಲೆಯ “ಪ್ರಥಮ ಜಿಲ್ಲಾ ಸಂಗೀತ ನೃತ್ಯೋತ್ಸವ” ಕನಕಪುರದಲ್ಲಿ ಪ್ರಥಮ “ಜಿಲ್ಲಾಯುವ ಸಂಗೀತ ನೃತ್ಯೋತ್ಸವ”, “ನಮ್ಮ ಸಾಧಕರು”, ಮಾಗಡಿಯಲ್ಲಿ ಪ್ರಥಮ ಬಾರಿಗೆ “ನಮ್ಮ ಸಾಧಕರು”, ಚನ್ನಪಟ್ಟಣದಲ್ಲಿ ಪ್ರಥಮ “ಗಂಗೋತ್ಸವ” ಹಾಗೂ “ರೇಷ್ಮೇ ನಾಡಜಿಲ್ಲಾ ಸಂಗೀತ ನೃತ್ಯೋತ್ಸವ” ಕಾರ್ಯಕ್ರಮಗಳನ್ನು ಏರ್ಪಡಿಸುವುದರೊಂದಿಗೆ ಎಲ್ಲಾ ತಾಲ್ಲೂಕುಗಳನ್ನು ಒಳಗೊಂಡAತೆ ಜಿಲ್ಲೆಯ ಸದಸ್ಯ ಸಂಚಾಲಕಿಯಾಗಿ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ಏರ್ಪಡಿಸಿರುವುದು ಹೆಮ್ಮೆಯ ಸಂಗತಿ.

ದೂರದರ್ಶನದಲ್ಲಿ ಪ್ರಸಾರವಾದ “ವಚನಾಮೃತ” ಕಾರ್ಯಕ್ರಮದಲ್ಲಿ ಹಾಡಿರುವ ವಚನಗಳು ವೀಕ್ಷಕರನ್ನು ವಿಶೇಷವಾಗಿ ಗಮನ ಸೆಳೆದಿವೆ. “ವಚನ ಸೌರಭ” ಧ್ವನಿ ಸುರುಳಿಯಲ್ಲಿ ಮುದ್ರಣಗೊಂಡಿವೆ. ಆಕಾಶವಾಣಿ, ದೂರದರ್ಶನಗಳಷ್ಟೇ ಅಲ್ಲದೆ, ಅನೇಕ ಖಾಸಗಿ ವಾಹಿನಿಗಳು, ಹಲವು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿವೆ.

ಭಾರತದ ಪ್ರತಿಷ್ಟಿತ “ಆಕಾಶವಾಣಿ ಸಂಗೀತ ಸಮ್ಮೇಳನ-೨೦೧೬”ರಲ್ಲಿ ವಚನ ಸಂಗೀತ ನಡೆಸಿಕೊಟ್ಟ ಭಾರತದ ಪ್ರಥಮ ಗಾಯಕಿ. ವಡವಾಟಿ ಶಾರದಾ ಭರತ್ ಅವರನ್ನು ೨೦೧೫ರ ರಾಜ್ಯೋತ್ಸವದಂದು ರಾಮನಗರ ಜಿಲ್ಲಾಡಳಿತ ಸನ್ಮಾನಿಸಿ ಗೌರವಿಸಿದೆ. “ವಿವೇಕಾನಂದ ಶಾಂತಿ ಪ್ರಶಸ್ತಿ”, “ಆದರ್ಶ ದಂಪತಿಗಳು ಪ್ರಶಸ್ತಿ”, “ಪರಮೇಶ್ವರ ಪುಲಕೇಶಿ ಪ್ರಶಸ್ತಿ”, ಹಾಗೂ ರಾಜ್ಯಮಟ್ಟದ “ಪಿ.ಕಾಳಿಂಗ ರಾವ್ ಸ್ಮರಣ ಪ್ರಶಸ್ತಿ”ಯೊಂದಿಗೆ “ಗಾನ ಕಲಾ ಭೂಷಣೆ” ಬಿರುದುಗಳೊಂದಿಗೆ ಹಲವು ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಬೆಂಗಳೂರಿನಲ್ಲಿ ಭಾರತ್ ಸಾಂಸ್ಕöÈತಿಕ ಕಲಾಕೇಂದ್ರದ ಮೂಲಕ ಮುಂದಿನ ಜನಾಂಗಕ್ಕೆ ಸಂಗೀತ ಹರಿಸುವುದರ ಮೂಲಕ ಸರಸ್ವತಿಯನ್ನು ಆರಾಧಿಸುತಿದ್ದಾರೆ. ಡಾ. ವಡವಾಟಿಯವರ ಜನುಮದಿನ ‘ಜನವರಿ ೨೧’ನ್ನು “ಕಲಾವಿದರ ದಿನ”ವಾಗಿ ಆಚರಿಸುವುದರ ಮೂಲಕ ಕಲೆ ಮತ್ತು ಕಲಾವಿದರನ್ನು ಆರಾಧಿಸುತ್ತಿದ್ದಾರೆ.

ಇವರ ಸಂಗೀತ ಸೇವೆಯನ್ನು ಗುರುತಿಸಿ ’ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ’ಗಳು ೨೦೨೪ನೆಯ ಸಾಲಿನ ’ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಲು ಹೆಮ್ಮೆ ಪಡುತ್ತದೆ.

ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ

ಓಂಶಿವಪ್ರಕಾಶ್ ಎಚ್. ಎಲ್

ಓಂಶಿವಪ್ರಕಾಶ್ ಎಚ್.ಎಲ್ ಅವರು ಡಿಜಿಟಲ್ ಆರ್ಕೈವಿಸ್ಟ್ ಮತ್ತು ವಾಣಿಜ್ಯೋದ್ಯಮಿಯಾಗಿದ್ದು, ಕಲೆ, ಇತಿಹಾಸ, ಸಂಸ್ಕೃತಿ ಮತ್ತು ಸಾಹಿತ್ಯದ ಮೇಲೆ ಕೇಂದ್ರೀಕರಿಸಿದ ಭಾಷಾ ತಂತ್ರಜ್ಞಾನ ಮತ್ತು ಡಿಜಿಟೈಜೇಷನ್ ಯೋಜನೆಗಳನ್ನು ಅಭಿವೃದ್ಧಿ ಮಾಡುತ್ತಾ ಬಂದಿದ್ದಾರೆ. ಎರಡು ದಶಕಗಳ ಐಟಿ ಅನುಭವದ ಜೊತೆಗೆ ಕನ್ನಡದ ಸುತ್ತ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ, ಮುಕ್ತ ಜ್ಞಾನ ಆಧಾರಿತ ಯೋಜನೆಗಳ ಅನುಷ್ಠಾನ ಹಾಗೂ ಭಾಗವಹಿಸುವಿಕೆಯ ಮೂಲಕ ಕಟ್ಟಿದ ಸಂಚಯ (https://sanchaya.org), ಕನ್ನಡ ಸಾಹಿತ್ಯ ಸಂಶೋಧನೆಯ ತಂತ್ರಜ್ಞಾನ ವೇದಿಕೆಯಾಗಿ ಬೆಳದಿದೆ. ವಚನ ಸಂಚಯ (https://vachana.sanchaya.net) -೨೦೧೨ ರಲ್ಲಿ ಸಂಚಯದ ಮೂಲಕ ಸೃಷ್ಟಿಸಲಾದ ಕನ್ನಡ ಸಾಹಿತ್ಯ ಸಂಶೋಧನಾ ಸಲಕರಣೆ. ಸಾವಿರರು ಮಂದಿ ಇಂದಿಗೂ ಇದನ್ನು ವಚನ ಸಾಹಿತ್ಯದ ಸಂಶೋಧನೆಗೆ ಬಳಸುತ್ತಿದ್ದಾರೆ. ಈ ತಂತ್ರಾಂಶ ಕನ್ನಡದ ಇತರೆ ಶಾಸ್ರ್ರೀಯ ಸಾಹಿತ್ಯಕ್ಕೂ ಬದಗಿಬರುತ್ತಿದೆ. ಕನ್ನಡ ಕಲೆ, ಇತಿಹಾಸ, ಸಂಸ್ಕೃತಿ ಮತ್ತು ಡಿಜಿಟಲ್‌ನಲ್ಲಿ ದಾಖಲಿಸುವ ಸಂಚಿ ಫೌಂಡೇಶನ್ (https://sanchifoundation.org) ಅನ್ನು ೨೦೧೪ರಲ್ಲಿ ಗೆಳೆಯರೊಂದಿಗೆ ಸ್ಥಾಪಿಸಿದ್ದು, ಕರ್ನಾಟಕದ ನಾಟಕ, ರಂಗಗೀತೆಗಳು, ಯಕ್ಷಗಾನ ಹೀಗೆ ಹಲವಾರು ಸಾಹಿತ್ಯ ಪ್ರಕಾರಗಳ ಸಾವಿರಾರು ಗಂಟೆಗಳ ಆಡಿಯೋ/ವಿಡಿಯೋ ದಾಖಲೀಕರಣ ಜನರಿಗೆ ಮುಕ್ತವಾಗಿ ಇಂಟರ್ನೆಟ್ನಲ್ಲಿ ಲಭ್ಯವಾಗಿವೆ.

ಅವರು #ServantsOfKnowledge ಯೋಜನೆಯ ಸಹ-ಸಂಸ್ಥಾಪಕರಾಗಿದ್ದು, ೨೦೧೮ ರಿಂದ ಇದು ಭಾರತದಾದ್ಯಂತ ವಿವಿಧ ಪುಸ್ತಕಗಳು, ಹಸ್ತಪ್ರತಿಗಳು ಮತ್ತು ನಿಯತಕಾಲಿಕೆಗಳನ್ನು ಡಿಜಿಟಲೈಸ್ ಮತ್ತು ಆರ್ಕೈವ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಕೆಲಸಗಳು ರಾಷ್ಟ್ರದ ಶ್ರೀಮಂತ ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಹಾಗೂ ಪರಂಪರೆಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ, ಜೊತೆಗೆ ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಭಾಷಾ ಸಮುದಾಯಗಳಿಗೆ ಸ್ಫೂರ್ತಿ ಮತ್ತು ಪ್ರಭಾವವನ್ನು ನೀಡುವುದನ್ನು ಮುಂದುವರೆಸಿವೆ, ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಅವರ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಓಂಶಿವಪ್ರಕಾಶ್ ಎಚ್.ಎಲ್ ಅವರ ಸಾಧನೆಯನ್ನು ಗುರುತಿಸಿ ’ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು’ ಮತ್ತು ’ರಮಣಶ್ರೀ ಪ್ರತಿಷ್ಠಾನ’ ಗಳು 2024 ನೆಯ ಸಾಲಿನ ’ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಲು ಹೆಮ್ಮೆ ಪಡುತ್ತವೆ.

ರಮಣಶ್ರೀ ಶರಣ ಪ್ರಶಸ್ತಿಗಳು

ಗ್ಯಾಲರಿ

ಪ್ರಶಸ್ತಿ ಸಮಾರಂಭದಿಂದ ಸೆರೆಹಿಡಿದ ಕ್ಷಣಗಳನ್ನು ಚಿತ್ರಗಳ ಮೂಲಕ ವೀಕ್ಷಿಸಿ.